×
Ad

ವಂಚನೆ ಪ್ರಕರಣ: ಆರೋಪಿಯ ಬಂಧನ

Update: 2016-01-14 12:10 IST

ಕಾಸರಗೋಡು :  ಪತ್ರಿಕೆಯಲ್ಲಿ  ವಿವಾಹ ವಾರ್ಷಿಕ ಜಾಹಿರಾತು ನೀಡಿ ವಂಚಿಸಿದ ಬಗ್ಗೆ ಲಭಿಸಿದ  ದೂರಿನಂತೆ  ಸುಬ್ರಹ್ಮಣ್ಯ ಗು೦ಡ್ಯದ   ವ್ಯಕ್ತಿಯೋರ್ವನನ್ನು ಕುಂಬಳೆ ಪೊಲೀಸರು  ಬಂಧಿಸಿದ್ದಾರೆ .

ಬಂಧಿತನನ್ನು  ಗುಂಡ್ಯದ   ದಯಾನಂದ  (35) ಎಂದು ಗುರುತಿಸಲಾಗಿದೆ.  ಪೆರ್ಮುದೆ ನಿವಾಸಿಯಾದ ಉಪ್ಪಳದಲ್ಲಿ  ಲ್ಯಾಬ್ ಟೆಕ್ನಿಶಿಯನ್  ನೀಡಿದ ದೂರಿನಂತೆ  ಈತನನ್ನು ಬಂಧಿಸಲಾಗಿದೆ.

ಬಸ್ಸು ಮಾಲಕನಾಗಿರುವ   ದಯಾನಂದ ಮತ್ತು  ಯುವತಿ ನಡುವೆ  ಪ್ರೇಮವಿತ್ತೆನ್ನಲಾಗಿದೆ.   ಉಪ್ಪಳ ಸಮೀಪದ ದೇವಸ್ಥಾನದಲ್ಲಿ ಕರಿಮಣಿ ಸರ ಹಾಕಿಸಿದ್ದು , ಬಳಿಕ    ವಿಟ್ಲಕ್ಕೆ  ಕರೆದೊಯ್ದು  ಸ್ಟುಡಿಯೋ ವೊಂದರಲ್ಲಿ ಫೋಟೋ ತೆಗೆಸಲಾಗಿದೆ.  

ಜನವರಿ ಒಂದರಂದು  ಪತ್ರಿಕೆಯೊಂದರಲ್ಲಿ  ವಿವಾಹ ವಾರ್ಷಿಕದ ಭಾವಚಿತ್ರ    ಪ್ರಕಟಿಸಿದ್ದು , ಇದರಿಂದ  ವಂಚನೆ ಬೆಳಕಿಗೆ ಬಂದಿದೆ. ವಿವಾಹ ಮೊಟಕು ಗೊಳಿಸಲು ಈ ತಂತ್ರ ನಡೆಸಿರುವುದಾಗಿ  ಸಂಶಯ ಉಂಟಾಗಿದ್ದು , ಯುವತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಳು . ಇದರಂತೆ ಆರೋಪಿಯನ್ನು ಬಂಧಿಸಲಾಗಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News