×
Ad

ಇಂದು ನವಕೇರಳ ಜಾಥಾ ಉದ್ಘಾಟನೆ

Update: 2016-01-15 09:14 IST

ಕಾಸರಗೋಡು : ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ,ಅಭಿವ್ರದ್ದಿ ಕೇರಳ ಎಂಬ  ಘೋಷಣೆಯೊಂದಿಗೆ ಸಿಪಿಐ ಎಂ    ರಾಜ್ಯ ಸಮಿತಿ ನೇತ್ರತ್ವದಲ್ಲಿ  ಪಾಲಿಟ್ ಬ್ಯುರೋ  ಸದಸ್ಯ ಪಿಣರಾಯಿ ವಿಜಯನ್  ನೇತ್ರತ್ವದ  ನವಕೇರಳ ಜಾಥಾ ಇಂದು  ಸಂಜೆ ಉಪ್ಪಳದಿಂದ ಪ್ರಯಾಣ ಬೆಳೆಸಲಿದೆ . ಜಾಥಾ ಉದ್ಘಾಟನೆಗೆ ಉಪ್ಪಳ  ಸಜ್ಜಾಗಿದೆ.

ಸಂಜೆ ಮೂರು  ಗಂಟೆಗೆ  ಉಪ್ಪಳ ಪೇಟೆಯಲ್ಲಿ ನಡೆಯುವ  ಸಮಾರಂಭದಲ್ಲಿ  ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್  ಜಾಥಾ ಕ್ಕೆ  ಚಾಲನೆ ನೀಡುವರು .  

ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ  ಕೊಡಿಯೇರಿ ಬಾಲಕೃಷ್ಣನ್  ಉಪಸ್ಥಿತರಿರುವರು.

ಜಾಥಾಕ್ಕೆ  ಇಂದು ಸಂಜೆ ಐದು ಗಂಟೆಗೆ  ಕಾಸರಗೋಡಿನಲ್ಲಿ  ಸ್ವಾಗತ ನೀಡಲಾಗುವುದು.  ನಾಳೆ   ಬೆಳಿಗ್ಗೆ  10  ಗಂಟೆಗೆ   ಚಟ್ಟ೦ಚಾಲ್,  ಕಾನ್ಚಾನ್ಗಾಡ್,  ತ್ರಿಕ್ಕರಿಪುರ , ಕಾಲಿಕ್ಕಡವು ನಲ್ಲಿ ಸ್ವಾಗತ ನೀಡಲಾಗುವುದು . 

ರಾಜ್ಯದ ಎಲ್ಲಾ ವಿಧಾನಸಭಾ  ಕ್ಷೇತ್ರದ ಮೂಲಕ ಹಾದು ಹೋಗುವ  ಯಾತ್ರೆ  ಫೆಬ್ರವರಿ 14 ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News