ಏನು ತಿನ್ನಬೇಕು , ಯಾವ ಸಮವಸ್ತ್ರ ಧರಿಸಬೇಕು ಎಂದು ಸಂಘ ಪರಿವಾರ ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ: ಪಿಣರಾಯಿ
ಕಾಸರಗೋಡು : ದೇಶದಲ್ಲಿ ಅಸಹಿಷ್ನುತೆ ಇದ್ದು , ಮಧ್ಯಪ್ರದೇಶದಲ್ಲಿ ನಡೆದ ಘಟನೆ ಸಾಕ್ಷಿ ಎಂದು ಸಿಪಿಎಂ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ಹೇಳಿದರು. ಅವರು ಶನಿವಾರ ಕಾಸರಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಏನು ತಿನ್ನಬೇಕು , ಯಾವ ಸಮವಸ್ತ್ರ ಧರಿಸಬೇಕು ಎಂಬ ಬಗ್ಗೆ ಇಂದು ಸಂಘ ಪರಿವಾರ ಹೇಳುವಂತೆ ನಡೆಯುವ ಸ್ಥಿತಿ ನಿರ್ಮಾಣವಾಗಿದೆ . ಸಂಚಾರ ಸ್ವಾತಂತ್ರ್ಯಕ್ಕೂ ಅಡ್ಡಿಪಡಿಸಲಾಗುತ್ತಿದೆ . ಮೋದಿ ಸರಕಾರ ಅಧಿಕಾರವನ್ನು ಸಂಘ ಪರಿವಾರಕ್ಕೆ ನೀಡಿದೆ ಎಂದರು .ಕೇರಳದಲ್ಲೂ ನೆಲೆಯೂರಲೂ ಸಂಘ ಪರಿವಾರ ಎಲ್ಲಾ ರೀತಿಯ ತಂತ್ರ ನಡೆಸುತ್ತಿದೆ . ಇದಕ್ಕೆ ಕೇರಳದ ಜನತೆ ಅವಕಾಶ ನೀಡಲಾರರು ಎಂದರು .
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ . ವಿ ಗೋವಿಂದನ್ , ಕೆ. ಜೆ ಥಾಮಸ್, ಸಂಸದ ಪಿ .ಕೆ ಬಿಜು , ಎ . ಸಂಪತ್ , ಪಿ. ಕೆ ಸೈನಬಾ , ಶಾಸಕ ಕೆ. ಟಿ ಜಲೀಲ್ , ಜಿಲ್ಲಾ ಕಾರ್ಯದರ್ಶಿ ಕೆ . ಪಿ ಸತೀಶ್ಚಂದ್ರನ್, ಮಾಜಿ ಶಾಸಕ ಸಿ . ಎಚ್ ಕುನ್ಚಂಬು , ಕೆ . ಆರ್ ಜಯಾನಂದ ಮೊದಲಾದವರು
ಉಪಸ್ಥಿತರಿದ್ದರು