×
Ad

ಕುಂಬಳೆ : ಹಾಡು ಹಗಲೇ ಮನೆಯಿಂದ ಕಳವು

Update: 2016-01-16 18:32 IST

ಮಂಜೇಶ್ವರ : ಮನೆಯವರು ಕ್ಷೇತ್ರ ಉತ್ಸವಕ್ಕೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ನಗ ನಗದು ದೋಚಿ ಪರಾರಿಯಾದ ಘಟನೆ ಕುಂಬಳೆ ದೇವೀನಗರದಲ್ಲಿ ನಡೆದಿದೆ.

  ಕುಂಬಳೆ ದೇವೀ ಮಠ ಬಳಿಯ ನಿವಾಸಿ ರಾಧಾಕೃಷ್ಣ ರಾವ್ ಎಂಬವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಕಳವು ನಡೆದಿದೆ.ಕಳವಿನಲ್ಲಿ ಐದು ಮುಕ್ಕಾಲು ಪವನ್ ಚಿನ್ನಾಭರಣ,6 ಸಾವಿರ ರೂ.ನಗದು ಹಾಗೂ ಮೊಬೈಲ್ ಪೋನ್ ದೋಚಲಾಗಿದೆ.

  ರಾಧಾಕೃಷ್ಣ ರಾವ್ ರ ಪತ್ನಿ ಹಾಗೂ ಪುತ್ರಿ ಶುಕ್ರವಾರ ಮಧ್ಯಾಹ್ನ ಮನೆಗೆ ಬೀಗ ಜಡಿದು ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೋತ್ಸವಕ್ಕೆ ತೆರಳಿದ್ದರು.ಅಪರಾಹ್ನ 3 ಗಂಟೆಗೆ ಮರಳಿದಾಗ ಮನೆಯ ಬೀಗ ಮುರಿದು ಹಾಗೂ ಒಳಗಿಂದ ಚಿಲಕ ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ.ಅಡುಗೆ ಕೋಣೆಯ ಬಾಗಿಲು ತೆರೆದಿದ್ದು,ಆ ಬಾಗಿಲಿನ ಮೂಲಕ ಒಳ ಪ್ರವೇಶಿಸಿ ನೋಡಿದಾಗ ಕಪಾಟು ಮುರಿದ ಸ್ಥಿತಿಯಲ್ಲಿ ಕಂಡುಬಂತು.ಈ ವೇಳೆ ಕಳವು ಕೃತ್ಯ ಗಮನಕ್ಕೆ ಬಂದಿದೆ.ಕುಂಬಳೆ ಪೋಲೀಸರು ಸ್ಥಳ ಸಂದರ್ಶಿಸಿ ಮಾಹಿತಿ ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News