×
Ad

ಕಾಸರಗೋಡು : ಜಾನುವಾರು ಸಾಗಾಟ ವಾಹನ ತಡೆದು ಕೊಲೆಗೆ ಯತ್ನ

Update: 2016-01-17 22:28 IST

ಕಾಸರಗೋಡು  :  ಜಾನುವಾರು ಸಾಗಾಟ ಮಾಡುತ್ತಿದ್ದ   ಪಿಕಪ್  ವ್ಯಾನನ್ನು ತಡೆದ ತಂಡವೊಂದು  ಅದರಲ್ಲಿದ್ದ ಮೂವರ ಕೊಲೆಗೆ ಯತ್ನಿಸಿದ ಘಟನೆ ಆದಿತ್ಯವಾರ ಸಂಜೆ   ಉಳಿಯತ್ತಡ್ಕ ಭಗವತಿ ನಗರದಲ್ಲಿ ನಡೆದಿದೆ .
ಗಾಯಗೊಂಡ  ಮಂಜತ್ತಡ್ಕ ದ    ಅಶ್ರಫ್  ( ೨೮) ,ಚಟ್ಟ೦ಚಾಲ್ ನ   ಹಮೀದ್ ( ೫೦) ಮತ್ತು ಚಾಲಕ  ಮುಹಮ್ಮದ್ ಕುನ್ಚಿ ( ೩೨) ಯವರ ಕೊಲೆಗೆ ಯತ್ನಿಸಿದೆ.
ಉಳಿಯತ್ತಡ್ಕ ದಿಂದ   ಕುಂಬಳೆ ಆರಿಕ್ಕಾಡಿಗೆ ಜಾನುವಾರು  ಹೇರಿಕೊಂಡು  ಹೋಗುತ್ತಿದ್ದಾಗ  ಉಳಿಯತ್ತಡ್ಕ ಭಗವತಿ ನಗರದಲ್ಲಿ  ತಂಡವೊಂದು ತಡೆದು  ಮೂವರನ್ನು ಪಿಕಪ್ ನಿಂದ  ಹೊರಗೆಳೆದು ಥಳಿಸಿದ್ದು ,  ಮಾರಕಾಸ್ತ್ರದಿಂದ  ಹಲ್ಲೆಗೂ ಯತ್ನಿಸಿದೆ. ಈ  ಸಂದರ್ಭದಲ್ಲಿ  ಪೊಲೀಸ್ ಜೀಪ್ ಬರುವುದನ್ನು  ಗಮನಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದು , ತಂಡದಲ್ಲಿನ  ಉದಯ ಕುಮಾರ್ ಎಂಬಾತನನ್ನು  ಪೊಲೀಸರು ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡಿದ್ದಾರೆ . ಇತರ ನಾಲ್ವರ ವಿರುದ್ದ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಕಾಸರಗೋಡು ಪೊಲೀಸರು ಹೆಚ್ಚಿನ ತನಿಖೆ  ನಡೆಸುತ್ತಿದ್ದಾರೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News