×
Ad

ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ

Update: 2016-01-18 11:58 IST

ಕಾಸರಗೋಡು : ಕೇರಳ ಸರಕಾರದ ಭಾಷಾ  ಮಸೂದೆ  ತಿದ್ದುಪಡಿ  ಹಿನ್ನೆಲೆಯಲ್ಲಿ  ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಉಂಟಾಗುತ್ತಿರುವ  ಸಮಸ್ಯೆಗಳ  ಸಾಧಕ - ಭಾದಕ ಗಳ ಕುರಿತು ಕಾಸರಗೋಡು ಮತ್ತು ಮಂಜೇಶ್ವರ ಶಾಸಕರು  ಕನ್ನಡ ಸಂಘಟನೆಗಳ ಪ್ರತಿನಿಧಿಗಳಿಂದ   ಅಹವಾಲು ಸ್ವೀಕರಿಸಿದರು. 

ಕಾಸರಗೋಡು  ಅತಿಥಿ ಗ್ರಹದಲ್ಲಿ  ಸಭೆ ನಡೆಯುತ್ತಿದ್ದು, ಮಂಜೇಶ್ವರ ಶಾಸಕ ಪಿ. ಬಿ  ಅಬ್ದುಲ್ ರಜಾಕ್ ,   ಕನ್ನಡಿಗರ ಸಮಸ್ಯೆಗಳ ಬಗ್ಗೆ  ಅಹವಾಲು  ಪಡೆಯುತ್ತಿದ್ದಾರೆ . 

ಕನ್ನಡ ಪರ ಸಂಘಟನೆಗಳು ಈ ಕಾರ್ಯಕ್ರಮ ಹಮ್ಮಿಕೊಂಡಿದೆ . ಕೇರಳ ಸರಕಾರ   ಭಾಷಾ ಮಸೂದೆ ಗೆ  ತಿದ್ದುಪಡಿ ತರಲು ಮುಂದಾಗಿದ್ದು , ಮಲಯಾಳ ಕಡ್ಡಾಯ ಮಾಡಲು ಸರಕಾರ ತೀರ್ಮಾನಿಸಿದೆ. ಈ ಬಗ್ಗೆ  ಕನ್ನಡಿಗರು ಹೋರಾಟಕ್ಕೆ  ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News