×
Ad

ಕಾಸರಗೋಡು : ಸೆಪ್ಟಿಕ್ ಟ್ಯಾಂಕ್ ಗಿಳಿದ ತಾಯಿ , ಪುತ್ರ ಸೇರಿದಂತೆ ಮೂವರ ಮೃತ್ಯು.

Update: 2016-01-19 19:24 IST

ಕಾಸರಗೋಡು :  ಸೆಪ್ಟಿಕ್  ಟ್ಯಾಂಕ್ ಗಿಳಿದ ತಾಯಿ , ಪುತ್ರ ಸೇರಿದಂತೆ  ಮೂವರ ಮೃತ್ಯು. ಕೇರಳದ ಕಣ್ಣೂರು ನಲ್ಲಿ ಇಂದು ಸಂಜೆ ನಡೆದ ಘಟನೆ .
ಕಣ್ಣೂರು ಚಕ್ಕರಕ್ಕಲ್  ಪಲ್ಲಿಪಾಯಲ್ ಎಂಬಲ್ಲಿ  ನಡೆದ ದಾರುಣ ಘಟನೆ .ಸತಿ ( ೫೦) ಪುತ್ರ ರತೀಶ್ ( ೨೮) ಮತ್ತು ಕೂಲಿ ಕಾರ್ಮಿಕ ಮುನೀರ್ ( ೩೫) ಮ್ರತಪಟ್ಟ ವರು.
ಸತಿ ಯವರ ಮನೆಯ ಶೌಚ ಗುಂಡಿ  ದುರಸ್ತಿಗೊಳಿಸಲು  ಇಳಿದ  ಮುನೀರ್  ಕುಸಿದು ಬಿದ್ದಿದ್ದು,  ಇವರನ್ನು ರಕ್ಷಿಸಲು  ರತೀಶ್ ಇಳಿದಿದ್ದು , ಇವರೂ  ಕುಸಿದು ಬಿದ್ದರು. ಗಾಬರಿ ಗೊಂಡ ಸತಿ ಇವರನ್ನು ರಕ್ಷಸಲು ಕೆಳಗಿಳಿದಿದ್ದು ಅವರು ಕೂಡಾ ಕುಸಿದು ಬಿದ್ದರು ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮೂವರನ್ನು ಮೇಲಕ್ಕೆತ್ತಿ ದರೂ  ಜೀವ ಉಳಿಸಲಾಗಲಿಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News