×
Ad

ಮಂಗಳೂರು : ಬ್ಯಾರಿ ಗಾದೆ, ಒಗಟು, ಚುಟುಕು, ಜನಪದ ಕತೆ, ಹಾಸ್ಯ ಬರಹ ಆಹ್ವಾನ

Update: 2016-01-19 21:16 IST

ಮಂಗಳೂರು,ಒ.19: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪೋಷಿಸುವ ನಿಟ್ಟಿನಲ್ಲಿ ಬ್ಯಾರಿ ಗಾದೆ, ಒಗಟು (ಎದ್‌ರ್ ಮಸಲೆ), ಚುಟುಕು, ಜನಪದ ಕತೆ, ಹಾಸ್ಯ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಬರಹಗಳನ್ನು ಆಹ್ವಾನಿಸಿದೆ.

   ಬ್ಯಾರಿ ಭಾಷೆಯಲ್ಲಿ ಚಾಲ್ತಿಯಲ್ಲಿರುವ ಹಳೆಯ ಮತ್ತು ಹೊಸ ಬ್ಯಾರಿ ಗಾದೆಗಳು ಹಾಗೂ ಅದರ ತಿರುಳನ್ನು ಸಂಕ್ಷಿಪ್ತವಾಗಿ ಬರೆದು ಕಳುಹಿಸಬೇಕು. ಬ್ಯಾರಿ ಭಾಷೆಯಲ್ಲಿ ಬಳಕೆಯಲ್ಲಿರುವ ಹಳೆಯ ಮತ್ತು ಹೊಸ ಬ್ಯಾರಿ ಒಗಟು (ಎದ್‌ರ್ ಮಸಲೆ)ಗಳನ್ನು ಪ್ರಶ್ನೋತ್ತರ ಸಮೇತ ಕಳುಹಿಸಬೇಕು. 4 ಅಥವಾ 6 ಸಾಲುಗಳಿಗೆ ಮೀರದ ಬ್ಯಾರಿ ಚುಟುಕುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಳುಹಿಸಿಕೊಡುವುದು.

  ಹಿರಿಯರಿಂದ ತಿಳಿದುಕೊಂಡ ಬ್ಯಾರಿ ಜನಪದ ಕತೆಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವುದು. ಬ್ಯಾರಿ ಭಾಷೆಯಲ್ಲಿ 100 ಶಬ್ದಗಳಿಗೆ ಮೀರದಂತೆ ಹಾಸ್ಯ ಬರಹ (ಚಿರಿಎಲ್‌ತಿ)ಗಳನ್ನು ಕಳುಹಿಸಬೇಕು. ಹಳೆಯ ಹಾಸ್ಯ ಬರಹಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದು. ಹಾಸ್ಯ ಬರಹಗಳು ಸಂಸ್ಕೃತಿಯ ಚೌಕಟ್ಟಿನೊಳಗಿರಬೇಕು.

                  ಎಲ್ಲ ಬರಹಗಳನ್ನು ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ಬರೆಯಬೇಕು. ಪ್ರಕಟಿತ ಬರಹಗಳಿಗೆ ಗೌರವಧನ ನೀಡಲಾಗುವುದು. ತಾವು ಬರೆದು ಕಳುಹಿಸುವ ವಿಷಯವು ಯಾವ ವಿಭಾಗಕ್ಕೆ ಸೇರಿದ್ದುಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಈಗಾಗಲೇ ನೀಡಿದ ದಿನಾಂಕವನ್ನು ಮತ್ತೆ ಫೆ.10ಕ್ಕೆ ವಿಸ್ತರಿಸಲಾಗಿದೆ.

               

 ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ 2016ರ ಫೆ.10ರೊಳಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರಿಸಿಡಿಯಮ್ ಕಮರ್ಷಿಯಲ್ ಕಾಂಪ್ಲೆಕ್ಸ್, ಅತ್ತಾವರ, ನಂದಿಗುಡ್ಡೆ ರಸ್ತೆ, ಮಂಗಳೂರು - 575001 ಈ ವಿಳಾಸಕ್ಕೆ ಬರಹಗಳನ್ನು ಕಳುಹಿಸಿಕೊಡಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ : 0824-2412297, 4260038, ಮೊಬೈಲ್ 9481149135ನ್ನು ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News