ಜೆಪ್ಪು ಸೈಂಟ್ ಜೋಸೆಫ್ ಕಾಲೇಜ್ ನಲ್ಲಿ ತೋಟಗಾರಿಕೆಯ ಕುರಿತು ಕಾರ್ಯಕ್ರಮ

Update: 2016-01-20 05:36 GMT

ಮಂಗಳೂರು: ಜೆಪ್ಪು ಸೈಂಟ್ ಜೋಸೆಫ್ ಕಾಲೇಜ್ ನಲ್ಲಿ ಪರಿಸರ ಸಂಘದ ವತಿಯಿಂದ ತಾರಸಿ ತೋಟಗಾರಿಕೆಯ ಕುರಿತು ಜ.16ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಸಂಪನ್ಮೂಳ ವ್ಯಕ್ತಿಯಾಗಿ ಪ್ರಖ್ಯಾತ ತಾರಸಿ ತೋಟಗಾರ ಕೃಷ್ಣಪ್ಪ ಗೌಡ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಸಾವಯುವಗೊಬ್ಬರ ಹಾಗೂ ತಾರಸಿ ತೋಟಗಾರಿಕೆಯ ಕುರಿತು ಮಾಹಿತಿ ಹಾಗೂ ತರಬೇತಿ ನೀಡಿದರು. 

ಬಳಿಕ ಕೃಷ್ಣಪ್ಪ ಗೌಡರನ್ನು ಪ್ರಾಂಶುಪಾಲರಾದ ರೇಫಾ ವಿಲ್ಫ್ರೇಡ್ ಪ್ರಕಾಶ್ ಡಿಸೋಜ ಅವರು, ಪರಿಸರ ಸಂಘದ ನಿರ್ವಾಹಕಿ, ಉಪನ್ಯಾಸಕಿ ದುರ್ಗ ಮೆನನ್ ಹಾಗೂ ವಿದ್ಯಾರ್ಥಿ ಅಧ್ಯಕ್ಷೆ ನಿಕ್ಷೀತಾ ಎಸ್. ಸನ್ಮಾನಿಸಿ ಗೌರವಿಸಿದರು. 
ಈ ಸಂದರ್ಭ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News