ಮೂಡುಬಿದಿರೆ : ಸನ್ಮಾನ
Update: 2016-01-20 22:34 IST
ಮೂಡುಬಿದಿರೆ : ಮೂಡುಬಿದಿರೆ ಉಪ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಳೆದ ಮೂರೂವರೆ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಪದೋನ್ನತಿ ಹೊಂದಿ ಡಿಸಿಎಫ್ಒ ಅಗಿ ಪುತ್ತೂರಿನ ಕೆಎಫ್ಡಿಸಿಗೆ ವರ್ಗಾವಣೆ ಹೊಂದಿರುವ ಕಿಶೋರ್ ಕುಮಾರ್ ಅವರಿಗೆ ಮೂಡುಬಿದಿರೆ ಕಛೇರಿಯಿಂದ ಬುಧವಾರ ರಾತ್ರಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ಸಹಿತ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.