×
Ad

ಕಾಸರಗೋಡು : ಕುಂಬಳೆ ಯಲ್ಲಿ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ - ಆರು ಮಂದಿಯ ಬಂಧಿನ

Update: 2016-01-23 21:42 IST

ಕಾಸರಗೋಡು :  ಕುಂಬಳೆ ಯಲ್ಲಿ   ಕ್ಷೇತ್ರ ಉತ್ಸವದ  ಸಂದರ್ಭದಲ್ಲಿ  ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ  ಘಟನೆಗೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಮೂಲದ   ಆರು ಮಂದಿ   ಯುವಕರನ್ನು  ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು  ಅಬ್ದುಲ್ ಖಾದರ್ ಯಾನೆ ಸಲ್ಮಾನ್ , ಮಜೀದ್ , ಶಾನ್ ವಾಜ್ , ನದೀಂ, ಮುಹಮ್ಮದ್  ರಹೀಬ್,  ಪರ್ವೇಜ್  ಎಂದು ಗುರುತಿಸಲಾಗಿದೆ.
ಇವರು ಕಾಸರಗೋಡು ಸುತ್ತಮುತ್ತ  ವಸ್ತ್ರ ಮಾರಾಟ ಮಾಡುತ್ತಿದ್ದರು. ಜನವರಿ ೧೭ ರಂದು  ರಾತ್ರಿ  ಕುಂಬಳೆ ಸರಕಾರೀ  ಹೈಸ್ಕೂಲ್ ಮೈದಾನ ಬಳಿ  ಕುಂಬಳೆ ಕಳತ್ತೂರು ಕಾರಿಂಜೆಯ  ಜಯಸೂರ್ಯ  ಮತ್ತು ಸ್ನೇಹಿತ ಜಗದೀಶ್ ( ೨೭) ಮೇಲೆ ಹಲ್ಲೆ ನಡೆಸಿದ್ದರು.
ಮಹಿಳೆಯರ ಭಾವಚಿತ್ರ  ಮೊಬೈಲ್ ನಲ್ಲಿ  ಕ್ಲಿಕ್ಕಿಸುತ್ತಿದ್ದಾಗ  ಪ್ರಶ್ನಿಸಿದ್ದಕ್ಕಾಗಿ  ತಂಡವು   ಹಲ್ಲೆ ನಡೆಸಿತ್ತು.  ಕುಂಬಳೆ ಯ ವಸತಿ ಗ್ರಹ ದಿಂದ  ಇವರನ್ನು  ಬಂಧಿಸಲಾಯಿತು.

 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News