ಉದ್ಯಾವರ ಉರೂಸ್: ಮತ ಪ್ರವಚನ

Update: 2016-01-23 18:01 GMT


 ಕುಂಜತ್ತೂರು, ಜ.23: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ಶುಕ್ರವಾರ ರಾತ್ರಿ ಮತ ಪ್ರವಚನ ನಡೆಯಿತು. ಉರೂಸ್ ಸಮಿತಿಯ ಅಧ್ಯಕ್ಷ ಅತಾವುಲ್ಲ ತಂಙಳ್ ಅಧ್ಯಕ್ಷತೆ ವಹಿಸಿದ್ದರು.ವಲಿಯುಲ್ಲಾಯಿ ಜಬ್ಬಾರ್ ಮಸ್ತಾನ್ ಮೂಳೂರು ದುಆ ಮಾಡಿದರು. ಸಮೀರ್ ವಾಫಿ ಹಾಗೂ ಮೌಲಾನ ಹಾಫಿಝ್ ಹಝ್ರತ್ ಸಾದಿಕ್ ಮುಬಲ್ಲಿಗ್ ಮುಂಬೈ ಮತ ಪ್ರಭಾಷಣಗೈದರು.ವೇದಿಕೆಯಲ್ಲಿ ಹನೀಫ್ ಕಜೆ, ರಹ್ಮಾನ್ ಉದ್ಯಾವರ, ಆಲಿಕುಟ್ಟಿ ನೇಷನಲ್, ಹನೀಪ್ ಪಿ., ಬಾವ ಹಾಜಿ, ಎಸ್. ಎಂ. ಬಶೀರ್ ಉಪಸ್ಥಿತರಿದ್ದರು.ಜ.24ರಂದು ಸುಬಹಿ ನಮಾಜಿನ ಬಳಿಕ ಉದ್ಯಾವರ ಸಾವಿರ ಜಮಾಅತಿನಲ್ಲಿ ಖಾಝಿ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ರ ನೇತೃತ್ವದಲ್ಲಿ ಮೌಲಿದ್ ಪಾರಾಯಣದ ಬಳಿಕ ಬೆಳಗ್ಗೆ 6ರಿಂದ ಸಂಜೆ 6ರ ತನಕ ಅನ್ನದಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News