×
Ad

ಬೋಳಂತೂರು: ಸಂದೇಶ ಕಾರ್ಯಕ್ರಮ

Update: 2016-01-23 23:37 IST


ಕಲ್ಲಡ್ಕ, ಜ.23: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ. ಜಿಲ್ಲೆ ಮತ್ತು ಪಿಎಫ್‌ಐ ಬೋಳಂತೂರು ವಲಯ ವತಿಯಿಂದ ಹುಬ್ಬುನ್ನೆಬಿ ಅಭಿಯಾನದ ಅಂಗವಾಗಿ ಪ್ರವಾದಿ(ಸ.) ಜೀವನ ಮತ್ತು ಸಂದೇಶ ಕಾರ್ಯಕ್ರಮವು ಬೋಳಂತೂರು ಎನ್. ಸಿ.ರೋಡಿನಲ್ಲಿ ನಡೆಯಿತು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಉಪಾಧ್ಯಕ್ಷ ಸೈಯದ್ ಇಬ್ರಾಹೀಂ ಅಲ್ ಹಾದಿ ತಂಙಳ್ ಆತೂರು ಕಾರ್ಯಕ್ರಮ ಉದ್ಘಾಟಿಸಿದರು. ಪಿಎಫ್‌ಐ ಕಲ್ಲಡ್ಕ ಡಿವಿಜನ್ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕ್ರಿಯೇಟಿವ್ ಫೌಂಡೇಷನ್‌ನ ಸಂಚಾಲಕ ಅನ್ವರ್ ಸಾದಾತ್ ಮುಖ್ಯ ಪ್ರಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಗೋಳ್ತಮಜಲು ಗ್ರಾಪಂ ಸದಸ್ಯ ಯೂಸುಫ್ ಕಲ್ಲಡ್ಕ, ಸಿಎಫ್‌ಐ ಮಂಚಿ ವಲಯ ಕಾರ್ಯದರ್ಶಿ ಅಹ್ಮದ್ ಕಬೀರ್, ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಸದಸ್ಯ ಮುಹಮ್ಮದ್, ಪಿಎಫ್‌ಐ ಸದಸ್ಯ ಸಾಹುಲ್ ಹಮೀದ್ ಬೋಳಂತೂರು ಭಾಗವಹಿಸಿದ್ದರು.
ತಪ್ಸೀರ್ ಕಲ್ಲಡ್ಕ ಸ್ವಾಗತಿಸಿದರು. ಅಶ್ರಫ್ ಬೋಳಂತೂರು ವಂದಿಸಿದರು. ಅಶ್ರಫ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News