ಕಾಸರಗೋಡು : ವೃದ್ದನ ಮೃತದೇಹ ಬಾವಿಯಲ್ಲಿ ಪತ್ತೆ
Update: 2016-01-24 11:16 IST
ಕಾಸರಗೋಡು : ವೃದ್ದನ ಮೃತದೇಹ ಬಾವಿಯಲ್ಲಿ ಪತ್ತೆ ಯಾದ ಘಟನೆ ನಗರ ಹೊರವಲಯದ ಎರಿಯಾಲ್ ನಲ್ಲಿ ನಡೆದಿದೆ.
ಮ್ರತಪಟ್ಟ ವರನ್ನು ಎರಿಯಾಲ್ ನ ವಿಶ್ವನಾಥ (೭೦) ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಮನೆಯ ಹಿತ್ತಿಲಿನ ಬಾವಿಯಲ್ಲಿ ಮ್ರತದೇಹ ಪತ್ತೆಯಾಗಿದೆ.
ಶನಿವಾರ ರಾತ್ರಿ ಮಲಗಿದ್ದ ಇವರು ಬೆಳಿಗ್ಗೆಯಿಂದ ನಾಪತ್ತೆ ಯಾಗಿದ್ದರು . ಶೋಧ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಕಾಸರಗೋಡು ನಗರ ಠಾಣೆ ಪೊಲೀಸರು ಮಹಜರು ನಡೆಸಿ , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.