×
Ad

ಕಾಸರಗೋಡು: ಸ್ತ್ರೀ ಸ್ವಾಭಿಮಾನ್ ಯಾತ್ರೆ ಗೆ ಚಾಲನೆ

Update: 2016-01-24 15:55 IST

ಕಾಸರಗೋಡು :    ಮೆಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಯಿಂದ ಸಮಾಜ ಮುಕ್ತಗೊಳ್ಳಬೇಕು, ಯುವ ತಲೆಮಾರು  ತಪ್ಪುದಾರಿಗೆ ತೆರಳುತ್ತಿದ್ದು , ಮಹಿಳೆ ಗೆ   ಲಭಿಸಬೇಕಾದ ಗೌರವ ಇಂದು ಲಭಿಸುತ್ತಿಲ್ಲ ಎಂದು  ಗೋವಾ ರಾಜ್ಯಪಾಲೆ  ಮ್ರದುಲ  ಸಿನ್ಹಾ  ಅಭಿಪ್ರಾಯಪಟ್ಟರು.
ಅವರು ಆದಿತ್ಯವಾರ ಕಾಸರಗೋಡು  ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರ ದಲ್ಲಿ  ಸ್ತ್ರೀ ಸ್ವಾಭಿಮಾನ್ ಯಾತ್ರೆ ಗೆ   ಚಾಲನೆ ನೀಡಿ ಮಾತನಾಡುತ್ತಿದ್ದರು . ಕೇರಳ  ಕ್ಷೇತ್ರ  ಸಂರಕ್ಷಣಾ ಸಮಿತಿಯ  ಸುವರ್ಣ ಜಯಂತಿಯಂಗವಾಗಿ 
ಮಾತ್ರ ಸಮಿತಿ ರಾಜಾಧ್ಯಕ್ಷೆ  ಪ್ರೊ. ವಿ . ಟಿ ರಮಾ ನೇತ್ರತ್ವದ ಈ ಯಾತ್ರೆ  ಕುಂಬಳೆ ಯ ಅನಂತಪುರದಿಂದ ಹೊರಟು ತಿರುವನಂತಪುರದ ಅನಂತಪುರಿಯಲ್ಲಿ ಕೊನೆಗೊಳ್ಳಲಿದೆ.
ಹೆಣ್ಮಕ್ಕಳಲ್ಲಿ  ಕೌಟು೦ಬಿಕ ಜ್ಞಾನ ತುಂಬಿಸಬೇಕು.   ಗೌರವ , ಪ್ರೀತಿ ಬದಲು ಅನೈತಿಕತೆ  ಸಮಾಜದಲ್ಲಿ ತುಂಬಿದೆ.  ಮೆಹಿಲೆ ಭೋಗದ  ವಸ್ತುವಾಗಿ ಕೆಲವರು ಕಾಣುತ್ತಿದ್ದಾರೆ. ಮಹಿಳೆಯನ್ನು ಮೊದಲು  ಗೌರವಿಸಬೆಕು ಎಂದು ಹೇಳಿದರು.   
ಸಮಾರಂಭದಲ್ಲಿ  ರವೀಶ ತಂತ್ರಿ ಕುಂಟಾರು  ಅಧ್ಯಕ್ಷತೆ  ವಹಿಸಿದ್ದರು.
 ಕಜಂಪಾಡಿ ಸುಬ್ರಹ್ಮಣ್ಯ ಭಟ್ , ಪಿ.  ಗೋಪಾಲನ್ ಕುಟ್ಟಿ ಮಾಸ್ಟರ್, ನ್ಯಾಯವಾದಿ ಕೆ. ಬಲರಾಂ,  ಎ .ಕೆ . ಬಿ ನಾಯರ್ , ಸ್ವಾಮಿ ಅಯ್ಯಪ್ಪದಾಸ್ , ಕೆ. ಎಸ್ ನಾರಾಯಣನ್ , ಸಂಧ್ಯಾ ವಿ. ಶೆಟ್ಟಿ , ಶಾಂತಾ ಎಸ್. ಪಿಳ್ಳೆ , ಪ್ರಮೀಳಾ ಸಿ. ನಾಯಕ್ , ನಿಶಾ ಸುಮನ್ , ರಾಜನ್ ಮುಳಿಯಾರು ಮೊದಲಾದವರು ಉಪಸ್ಥಿತರಿದ್ದರು.
ಯಾತ್ರೆ ಫೆಬ್ರವರಿ ಏಳರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ . 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News