×
Ad

ಮಂಗಳೂರು : ರೋವರ್ಸ್- ರೇಂಜರ್ಸ್‌ಗಳಿಗಾಗಿ ಜ.27-31: ಮುಲ್ಕಿಯಲ್ಲಿ ಜಲ ಸಾಹಸ ಶಿಬಿರ

Update: 2016-01-25 16:34 IST

*ರಾಷ್ಟ್ರ ಮಟ್ಟದ ಶಿಬಿರಕ್ಕೆ ಕರ್ನಾಟಕದಲ್ಲೇ ಪ್ರಥಮ ಅವಕಾಶ

ಮಂಗಳೂರು, ಜ. 25: ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಹಿರಿಯ ವಿದ್ಯಾರ್ಥಿಗಳ ವಿಭಾಗವಾಗಿರುವ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗಾಗಿ ನಡೆಯುವ ರಾಷ್ಟ್ರ ಮಟ್ಟದ ಜಲ ಸಾಹಸ ಶಿಬಿರ ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಮುಲ್ಕಿಯಲ್ಲಿ ನಡೆಯಲಿದೆ ಎಂದು ಜಿಲ್ಲಾಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜ. 27ರಿಂದ 31ರವರೆಗೆ ಐದು ದಿನಗಳ ಕಾಲ ಮುಲ್ಕಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳ ಬಳಿಯ ಸಮುದ್ರ ಮತ್ತು ಶಾಂಭವಿ ನದಿಯಲ್ಲಿ ಈ ಶಿಬಿರ ನಡೆಯಲಿದೆ ಎಂದರು.

ಶಿಬಿರದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ತಲಾ 5ರಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯ ಮಕ್ಕಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ತಲಾ 50ರಂತೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಆಸಕ್ತ ವಿದ್ಯಾರ್ಥಿಗಳಿಗೆ ಶಿಬಿರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 1000 ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಕಾರ್ಯಕ್ರಮ ವೀಕ್ಷಣೆಗಾಗಿ ಉಭಯ ಜಿಲ್ಲೆಗಳಿಂದ ನಿತ್ಯವೂ ಆಗಮಿಸಲಿದ್ದಾರೆ. ಜ. 27ರಂದು ಸಂಜೆ 3.30ಕ್ಕೆ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚವ ಬಿ. ರಮಾನಾಥ ರೈ ನೆರವೇರಿಸಲಿದ್ದು, ಇತರ ಗಣ್ಯರು ಭಾಗವಹಿಸಲಿದ್ದಾರೆ. ಜ.30ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಿಲ್ಲಾಕಾರಿ ತಿಳಿಸಿದರು.

ಶಿಬಿರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಲ ಸಾಹಸ ಕ್ರೀಡೆಯಲ್ಲಿ ಪ್ರಸಿದ್ಧಿಯಾಗಿರುವ ಅಮೆರಿಕ ದೇಶದ ಮೂಲಕ ಮಂತ್ರ ಸರ್ ಕ್ಲಬ್ ಸಹಯೋಗದಲ್ಲಿ ಸಾಹಸ ಕ್ರೀಡೆಯ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಗುವುದು. ನೀರಿನಲ್ಲಿ ನಡೆಸುವ ವಿಶಿಷ್ಟ ರೀತಿಯ ಕ್ರೀಡೆ ಹಾಗೂ ಪ್ರಕೃತಿ ವಿಕೋಪಗಲಿಂದ ಉಂಟಾಗಬಹುದಾದ ದುರಂತಗಳ ಸಂದರ್ಭ ಜನರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಪೂರಕವಾದ ವಿವಿಧ ರೀತಿಯ ರಕ್ಷಣಾ ಕಾರ್ಯಗಳ ಬಗ್ಗೆ ತರಬೇತಿಯನ್ನು ನೀಡಿ ಮಕ್ಕಳಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುವುದು ಈ ತರಬೇತಿಯ ಉದ್ದೇಶ ಎಂದು ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ದ.ಕ.ಜಿಲ್ಲಾ ಮುಖ್ಯ ಯಾಉಕ್ತ ಎನ್.ಜಿ. ಮೋಹನ್ ವಿವರ ನೀಡಿದರು.

ಶಿಬಿರದಲ್ಲಿ ಬೆಳಗ್ಗೆ 5 ಗಂಟೆಯಿಂದ ಯೋಗ, ಧ್ಯಾನ, ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ. ಸ್ವಚ್ಛ್ ಭಾರತ್ ಕಾರ್ಯಕ್ರಮದಡಿ ಈ ಪ್ರದೇಶದ ಸಮುದ್ರ ಕಿನಾರೆ ಶುಚಿಗೊಳಿಸುವುದು, ನಮ್ಮ ನಾಡಿನ ವಿವಿಧ ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವುದು, ತುಳುನಾಡಿನ ಸಂಸ್ಕೃತಿಯ ಮಾಹಿತಿಗಾಗಿ ತುಳುನಾಡು ವೈಭವದಂತಹ ಕಾರ್ಯಕ್ರಮಗಲು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಶಿಬಿರಾರ್ಥಿಗಳಿಂದ ನಡೆಯಲಿದೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಕಾರಿ ಕುಮಾರ್, ಸ್ಕೌಟ್ಸ್ ಗೈಡ್ಸ್ ಸ್ವಾಗತ ಸಮಿತಿಯ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮುಲ್ಕಿಯ ಅಧ್ಯಕ್ಷ ಸರ್ವೋತ್ತಮ ಅಂಚನ್ ಯೋಗ ಗುರು ಜಯ ಮುದ್ದು ಶೆಟ್ಟಿ, ರಾಮಶೇಷ ಶೆಟ್ಟಿ, ಸಂತೋಷ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News