ಕಾಸರಗೋಡು : ಮತದಾರರ ದಿನದಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ
Update: 2016-01-25 18:33 IST
ಕಾಸರಗೋಡು : ಮತದಾರರ ದಿನದಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಲೇಖಕ ಸಂತೋಷ್ ಎಚ್ಚಿಕ್ಕಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೆಚ್ಚುವರಿ ದಂಡಾಧಿಕಾರಿ ಎಚ್ . ದಿನೇಶನ್ ಅಧ್ಯಕ್ಷತೆ ವಹಿಸಿದ್ದರು. ಕ್ವಿಜ್ ಸ್ಪರ್ಧಾ ವಿಜೇತರಿಗೆ ಉಪ ಜಿಲ್ಲಾಧಿಕಾರಿ ಮ್ರಣ್ ಮಾಯಿ ಜೋಷಿ ಬಹುಮಾನ ವಿತರಿಸಿದರು. ಉಪಜಿಲ್ಲಾಧಿಕಾರಿ ಏನ್ . ದೇವಿದಾಸ್ , ಡಾ. ಪಿ. ಕೆ ಜಯಶ್ರೀ , ಬಿ. ಅಬ್ದುಲ್ ನಾಸರ್ , ಕೆ. ಸೀತಾರಾಮ , ಕೆ. ಕುನ್ಚಂಬು ನಾಯರ್ ಮಾತನಾಡಿದರು .
ಎಂ .ಸಿ ಜೆರಿನ್ ಸ್ವಾಗತಿಸಿ , ಜಯಲಕ್ಷ್ಮಿ ವಂದಿಸಿದರು.