ಉಡುಪಿ ; ಶೇ.98ರಷ್ಟು ಉದ್ಯೋಗ ಸೃಷ್ಟಿಸುವ ಖಾಸಗಿ ವಲಯದಲ್ಲಿ ಮೀಸಲಾತಿ ಅಗತ್ಯ: ಡೀಕಯ್ಯ
ಉಡುಪಿ, ಜ.26: ಸಾಮಾಜಿಕ ಸ್ಥಿತ್ಯಂತರ ಆಗುವವರೆಗೆ ಮೀಸಲಾತಿ ಅತಿ ಅಗತ್ಯ. ಇಂದು ಸರಕಾರಿ ವಲಯದಲ್ಲಿ ಶೇ.2ರಷ್ಟು ಹಾಗೂ ಖಾಸಗಿ ವಲಯ ದಲ್ಲಿ ಶೇ.98ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿವೆ. ಆದುದರಿಂದ ಖಾಸಗಿ ವಲಯ ದಲ್ಲಿ ಮೀಸಲಾತಿಯನ್ನು ನೀಡಲೇಬೇಕು ಎಂದು ಸಮಾಜ ಪರಿವರ್ತನಾ ಚಳವಳಿ ನಾಯಕ, ದಲಿತ ಚಿಂತಕ ಪಿ.ಡೀಕಯ್ಯ ಮಂಗಳೂರು ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಮಾಜ ಪರಿವರ್ತನಾ ಚಳವಳಿ ವತಿಯಿಂದ 67ನೆ ಸಂವಿಧಾನ ದಿನಾಚರಣೆಯ ಪ್ರಯುಕ್ತ ಆದಿಉಡುಪಿಯ ಅಂಬೇಡ್ಕರ್ ಭವನ ದಲ್ಲಿ ಮಂಗಳವಾರ ಆಯೋಜಿಸಲಾದ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಚಾರ ಮಂಡಿಸಿದರು.
ಮನುವಾದಿಗಳು ನಮ್ಮ ವಿರೋಗಳು. ಅದಕ್ಕೆ ನಾವು ಪ್ರತಿಕ್ರಿಯೆ ನೀಡುವು ದಲ್ಲ. ಬದಲಾಗಿ ಕ್ರಿಯೆಯನ್ನು ಕೊಡಬೇಕು. ಇದರಿಂದ ಮಾತ್ರ ನಮ್ಮ ಚಳವಳಿ ನಿರ್ಣಾಯಕವಾಗಿ ತಾರ್ಕಿಕ ಅಂತ್ಯಕ್ಕೆ ತಲುಪಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಆಶಯವನ್ನು ನಾವು ಗಂಭೀರವಾಗಿ ತೆಗೆದುಕೊಂಡಿರುತ್ತಿದ್ದರೆ ಇಂದು ಅಕಾರ ನಮ್ಮ ಕೈಯಲ್ಲಿ ಇರುತ್ತಿತ್ತು ಎಂದವರು ಅಭಿಪ್ರಾಯಪಟ್ಟರು.
ಜಾತಿ ಎಂಬುದು ಮಾನಸಿಕ ಭ್ರಮೆ. ಅದನ್ನು ಸಮಾನತೆಯ ಮೂಲಕ ಕಿತ್ತೆಸೆಯಬೇಕು. ಭಾವನೆಯ ಮೂಲಕ ಒಡೆದು ಆಳುವ ನೀತಿಯನ್ನು ಅನು ಸರಿಸಲಾಗುತ್ತಿದೆ. ಭಾವನೆಯನ್ನು ವಿಮೋಚನೆಯಿಂದ ನೋಡಬೇಕಾಗಿದೆ. ಸಂವಿಧಾನ ನಮ್ಮ ರಕ್ಷಣೆಗೆ ಇದ್ದರೂ ಖಾಸಗಿ ರಂಗವೂ ನಮ್ಮ ಬದುಕನ್ನೇ ಬಲಿ ತೆಗೆದುಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ದಲಿತರಿಗೆ ಬುದ್ಧನ ಯುಗವು ಬೆಳಕಿನ ಯುಗವಾಗಿದ್ದರೆ ಹಿಂದುತ್ವದ ಯುಗವು ಕತ್ತಲೆಯುಗವಾಗಿ ಪರಿಣಮಿಸಲಿದೆ. ಅಂಬೇಡ್ಕರ್ರನ್ನು ಸರಿಯಾಗಿ ತಿಳಿದುಕೊಳ್ಳದ ಪರಿಣಾಮ ನಾವು ಇಂದು ಹಿಂದುತ್ವ, ಕೋಮುವಾದ, ಜಾತಿ ವಾದದ ಬಾವಿಗೆ ಬೀಳುತ್ತಿದ್ದೇವೆ. ಅಂಬೇಡ್ಕರ್ ತೋರಿಸಿಕೊಟ್ಟ ದಾರಿಯಲ್ಲಿ ನಡೆಯುವುದರಿಂದ ಮಾತ್ರ ವಿಮೋಚನೆ ಸಾಧ್ಯ ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಚಳವಳಿಯ ರಾಜ್ಯ ನಾಯಕ ಜಾಕೀರ್ ಹುಸೇನ್ ಹೊರಟ್ಟಿ ಮಾತನಾಡಿ, ಇಂದು ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಾವು ಜಾಗೃತರಾಗದಿದ್ದರೆ ಮುಂದಿನ ಪೀಳಿಗೆಯ ಬದುಕು ನರಕವಾಗಲಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ಬಗ್ಗೆ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಬಹುಜನ ಚಿಂತಕ ಎಂ.ನಾರಾಯಣ ಮಣೂರು ವಹಿಸಿ ದ್ದರು. ಈ ಸಂದರ್ಭದಲ್ಲಿ ‘ಮಾತೆ ಸಾವಿತ್ರಿ ಬಾಪುಲೆ’ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಭು ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಪೊರೇಶನ್ ಬ್ಯಾಂಕ್ ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷೆ ಶಾಂತ ನಾಯ್ಕೆ,ಚಳವಳಿಯ ಮುಖಂಡರಾದ ಸುಂದರ್ ಮಾಸ್ತರ್, ಉದಯ ಕುಮಾರ್ ತಲ್ಲೂರು, ಶೇಖರ್ ಹೆಜ್ಮಾಡಿ, ರಮೇಶ್ ಕೋಟ್ಯಾನ್, ವಿಶ್ವನಾಥ್ ಪೇತ್ರಿ, ಅನಂತ್ ನಾಯ್ಕಿ, ಪ್ರಮೋದ್ ಹೊನ್ನಾವರ, ಜಗ್ಗು, ಸುರೇಶ್ ಬಾಬು ಉಪಸ್ಥಿತರಿದ್ದರು.
ಮಂಜುನಾಥ್ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಬಂಟ ಕಲ್ ಸ್ವಾಗತಿಸಿದರು. ಮಂಜುನಾಥ್ ಬಾಳ್ಕುದ್ರು ವಂದಿಸಿದರು. ಪ್ರದೀಪ್ ಇನ್ನಂಜೆ ಕಾರ್ಯಕ್ರಮ ನಿರೂಪಿಸಿದರು.
ಮನುವಾದಿಗಳಿಗೆ ಮಂತ್ರಾಕ್ಷತೆ ಮನುವಾದಿಗಳಿಬ್ಬರ ನಡುವಿನ ಪೂಜಾ ಅಕಾರ ಹಸ್ತಾಂತರ ಕಾರ್ಯ ಕ್ರಮವಾಗಿರುವ ಪರ್ಯಾಯದಲ್ಲಿ ನಮ್ಮ ಜನ ಮುಳುಗಿ ಹೋಗಿರುವುದು ವಿಪ ರ್ಯಾಸ. ಅದಕ್ಕಾಗಿ ಕೋಟ್ಯಂತರ ರೂ. ವ್ಯಯ ಮಾಡಲಾಗುತ್ತಿದೆ. ಇದರಿಂದ ಯಾರ ಬದುಕು ಪರಿವರ್ತನೆಯಾಗಲ್ಲ ಎಂದು ಡೀಕಯ್ಯ ಟೀಕಿಸಿದರು.
ಮಡೆಸ್ನಾನವನ್ನು ಬೆಂಬಲಿಸುವ ಮನುವಾದಿಗಳಿಗೆ ವಿವೇಕ, ಮನುಷ್ಯತ್ವ ಎಂಬುದೇ ಇಲ್ಲ. ಮನುವಾದಿಗಳಿಂದ ಮಂತ್ರಾಕ್ಷತೆ ಪಡೆದುಕೊಳ್ಳುವ ದಯ ನೀಯ ಸ್ಥಿತಿ ದಲಿತರಿಗೆ ಬಂದಿರುವುದು ದುರಂತ. ಮನುಷ್ಯರಾಗಿ ಬದುಕುವಂತೆ ಮೊದಲು ನಾವು ಅವರಿಗೆ ಮಂತ್ರಾಕ್ಷತೆ ನೀಡಬೇಕು ಎಂದರು.