ಕುಂಬೋಲ್ ಉರೂಸ್ಗೆ ಚಾಲನೆ
ಕಾಸರಗೋಡು, ಜ.26: ಕುಂಬೋಲ್ ಸೈಯದ್ ಹಸಲ್ ಪೂಕ್ಕೋಯ ತಂಳ್ರ ಉರೂಸ್, ಪಾಪಂಕೋಯ ತಂಳ್ರ 83ನೆ ಆಂಡ್ ನೇರ್ಚೆಗೆ ಆರಿಕ್ಕಾಡಿ ಪಿ.ಕೆ. ನಗರದಲ್ಲಿ ಚಾಲನೆ ದೊರೆಯಿತು.
ಸೈಯದ್ ಕೆ.ಎಸ್. ಉಮರ್ ಕುಂಞಿಕ್ಕೋಯ ತಂಳ್ ಧ್ವಜಾರೋಹಣಗೈದರು. ಸೈಯದ್ ಕುಂಞಿಕ್ಕೋಯ ತಂಳ್ ಮುಟ್ಟಂ ಮಖಾಂ ಝಿಯಾರತ್ಗೆ ನೇತೃತ್ವ ನೀಡಿದರು. ಕೆ.ಎಸ್. ಅಟ್ಟಕ್ಕೋಯ ತಂಳ್, ಸೈಯದ್ ಕೆ.ಎಸ್. ಅಲಿ ತಂಳ್, ಡಾ. ಸೈಯದ್ ಸಿರಾಜ್ ತಂಳ್, ಸೈಯದ್ ಜಅ್ರ್ ಸ್ವಾದಿಕ್ ತಂಳ್, ಎಂ. ಆಲಿಕುಂಞಿ ಮುಸ್ಲಿಯಾರ್ ಶಿರಿಯ, ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಪಿ.ಬಿ. ಅಬ್ದುರ್ರಝಾಕ್, ಎನ್.ಎ. ನೆಲ್ಲಿಕುನ್ನು, ಡಾ. ಶಾಂತರಾಮ್ ಶೆಟ್ಟಿ, ಯೆನಪೊಯ ವಿಶ್ವವಿದ್ಯಾನಿಲಯ ಉಪಕುಲಪತಿ ವೈ. ಅಬ್ದುಲ್ಲ ಕುಂಞಿ, ಡಾ. ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಳ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಸಂಯುಕ್ತ ಖಾಝಿ ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕೆರೆ ಖಾಝಿ ಪಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಅತಿಥಿಯಾಗಿ ಭಾಗವಹಿಸಿದ್ದರು. ಮಾಲಿಕ್ದೀನಾರ್ ಜಮಾಅತ್ ಮಸೀದಿ ಖತೀಬ್ ಅಬ್ದುಲ್ ಮಜೀದ್ ಬಾಖವಿ ಮುಖ್ಯ ಭಾಷಣಗೈದರು. ಜ.31ರಂದು ಉರೂಸ್ ಸಮಾರೋಪಗೊಳ್ಳಲಿದೆ.