×
Ad

ಕಾಸರಗೋಡು: ಜನ ಜಾಗೃತಾ ಯಾತ್ರೆ

Update: 2016-01-30 10:11 IST

ಕಾಸರಗೋಡು  : ಅಸಹಿಷ್ಣುತೆ  ಮತ್ತು ಸಮುದಾಯ ಧ್ರುವೀಕರಣದ  ವಿರುದ್ಧ  ಇಂಡಿಯನ್ ನೇಶನಲ್  ಲೀಗ್ ( ಐ ಎನ್ ಎಲ್ )  ರಾಜ್ಯ ಪ್ರಧಾನ ಕಾರ್ಯದರ್ಶಿ  ಎ .ಪಿ ಅಬ್ದುಲ್ ವಹಾಬ್ ನೇತ್ರತ್ವದ  ಜನ ಜಾಗೃತಾ  ಯಾತ್ರೆ ಜ.30ರಂದು ಸಂಜೆ ಕಾಸರಗೋಡಿನಿಂದ ಪ್ರಯಾಣ  ಬೆಳೆಸಲಿದೆ.

ಇಂದು ಸಂಜೆ  ನಾಲ್ಕು ಗಂಟೆಗೆ ನಗರದ  ಹೊಸ ಬಸ್ ನಿಲ್ದಾಣ ಸಮೀಪ  ನಡೆಯುವ  ಸಮಾರಂಭದಲ್ಲಿ  ಐ ಎನ್ ಎಲ್  ರಾಷ್ಟ್ರೀಯ  ಅಧ್ಯಕ್ಷ   ಮುಹಮ್ಮದ್ ಸುಲೈಮಾನ್   ಚಾಲನೆ ನೀಡುವರು.

ರಾಜ್ಯ ಅಧ್ಯಕ್ಷ ಎಸ್. ಎ  ಪುದಿಯವಳಪ್ಪಿಲ್ ಅಧ್ಯಕ್ಷತೆ ವಹಿಸುವರು. ರಾಜ್ಯ ಮುಖಂಡರಾದ  ಬಿ. ಮೂಸಾ  ಹಾಜಿ , ಕೆ. ಪಿ ಇಸ್ಮಾಯಿಲ್, ಎನ್. ಕೆ ಅಬ್ದುಲ್ ಅಝೀಝ್ , ಅಜಿತ್ ಕುಮಾರ್ ಅಜಾದ್ ,    ಜುಬೈರ್ ಪಡುಪ್ಪು ಮೊದಲಾದವರು ಉಪಸ್ಥಿತರಿರುವರು. ಯಾತ್ರೆ ಫೆಬ್ರವರಿ  ೧೩ ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ 

ಐ ಎನ್ ಎಲ್  ಜನ ಜಾಗ್ರತಾ ಯಾತ್ರೆಗೆ ಪೂರ್ವಭಾವಿ ಯಾಗಿ ಕಾಸರಗೋಡು ನಗರದಲ್ಲಿ ನಡೆದ ಮೆರವಣಿಗೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News