ಕಾಸರಗೋಡು : ಜಿಲ್ಲಾದಿಕಾರಿ ಕಚೇರಿಯಲ್ಲಿ ಮಾತಿನ ಚಕಮಕಿ, ಹೊಯಿಕೈ
Update: 2016-01-30 14:25 IST
ಕಾಸರಗೋಡು : ಜಿಲ್ಲಾದಿಕಾರಿ ಕಚೇರಿಯಲ್ಲಿ ನಡೆದ ಎಂಡೋಸಲ್ಫಾನ್ ಸಭೆಯಲ್ಲಿ ಮಾತಿನ ಚಕಮಕಿ ಮತ್ತು ಹೊಯಿಕೈ ಗೆ ಸಾಕ್ಷಿಯಾದ ಘಟನೆ ಶನಿವಾರ ನಡೆಯಿತು .
ಜಿಲ್ಲಾ ಉಸ್ತುವಾರಿ ಸಚಿವ ಕೆ. ಪಿ ಮೋಹನನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಸಚಿವರು ನೀಡಿದ ಹೇಳಿಕೆಯು ಜನಪ್ರತಿನಿಧಿಗಳು ಮತ್ತು ಸಂತ್ರಸ್ಥರನ್ನು ಕೆರಳಿಸಿದ್ದು ಗದ್ದಲ ನಡೆಯಿತು.
ಸಂಸದ ಪಿ. ಕರುಣಾಕರನ್ , ಶಾಸಕ ಕೆ. ಕುನ್ಚಿರಾಮನ್, ಇ . ಚಂದ್ರಶೇಖರನ್ , ಜಿಲ್ಲಾ ಪಂಚಾಯತ್ ಸದಸ್ಯ ವಿ . ಪಿ .ಪಿ ಮುಸ್ತಫಾ ಮೊದಲಾದವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು.