×
Ad

ಕಾಸರಗೋಡು : ಐದನೆ ದಿನಕ್ಕೆ ಕಾಲಿಟ್ಟ ಎಂಡೋಸಲ್ಫಾನ್ ಸಂತ್ರಸ್ಥರ ಧರಣಿ

Update: 2016-01-30 16:07 IST

ಕಾಸರಗೋಡು : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ಥರು  ತಿತುವನಂತಪುರದ ಸಚಿವಾಲಯದ ಮುಂಭಾಗದಲ್ಲಿ ನಡೆಸುತ್ತಿರುವ  ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ  ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ಮುಸ್ಖರಕ್ಕೆ ಸೋಲಿಡಾರಿಟಿ , ಎ ಐ ಟಿ ಯು ಸಿ , ಎನ್ ಜಿ ಓ  ಸೇರಿದಂತೆ ಹಲವು ಸಂಘಟನೆಗಳು  ಬೆಂಬಲ  ಸೂಚಿಸಿವೆ. 

ಶನಿವಾರದಂದು  ಮಾಜಿ ಸಚಿವ ಕೆ . ಪಿ ರಾಜೇಂದ್ರನ್ , ಸಿ ಪಿ ಐ ಮುಖಂಡ ಪಣ್ಯನ್ ರವೀಂದ್ರನ್ , ಬಿನೋಯ್ ವಿಶ್ವ೦, ಬಿ . ಆರ್ ಪಿ  ಭಾಸ್ಕರ್ ಮೊದಲಾದವರು ಭೇಟಿ ನೀಡಿ ಸತ್ಯಾಗ್ರಹಕ್ಕೆ  ಬೆಂಬಲ ಸೂಚಿಸಿದರು.

ಶುಕ್ರವಾರ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಜೊತೆ  ಹೋರಾಟ ಸಮಿತಿ ಮುಖಂಡರು ಮಾತುಕತೆ ನಡೆಸಿದರೂ ವಿಫ಼ಲ ಗೊಂಡ ಹಿನ್ನಲೆಯಲ್ಲಿ ಸತ್ಯಾಗ್ರಹ  ಐದನೇ ದಿನವೂ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News