×
Ad

ಕಾಸರಗೋಡು : ಅಸಹಿಷ್ಣುತೆ ಮತ್ತು ಸಮುದಾಯ ಧ್ರುವೀಕರಣ ದ ವಿರುದ್ದ ಜನ ಜಾಗ್ರತಾ ಯಾತ್ರೆ,

Update: 2016-01-30 20:19 IST

ಕಾಸರಗೋಡು : ಅಸಹಿಷ್ಣುತೆ  ಮತ್ತು ಸಮುದಾಯ ಧ್ರುವೀಕರಣ ದ  ವಿರುದ್ದ  ಇಂಡಿಯನ್ ನೇಶನಲ್  ಲೀಗ್ ( ಐ ಎನ್ ಎಲ್ )  ರಾಜ್ಯ ಪ್ರಧಾನ ಕಾರ್ಯದರ್ಶಿ  ಎ . ಪಿ ಅಬ್ದುಲ್ ವಹಾಬ್ ನೇತ್ರತ್ವದ  ಜನ ಜಾಗ್ರತಾ   ಯಾತ್ರೆ    ಶನಿವಾರ  ಸಂಜೆ ಕಾಸರಗೋಡಿನಿಂದ ಪ್ರಯಾಣ  ಬೆಳೆಸಿತು.

ನಗರದ  ಹೊಸ ಬಸ್ಸು ನಿಲ್ದಾಣ ಸಮೀಪ  ನಡೆಯುವ  ಸಮಾರಂಭದಲ್ಲಿ  ಐ ಎನ್ ಎಲ್  ರಾಷ್ಟ್ರೀಯ  ಅಧ್ಯಕ್ಷ   ಮುಹಮ್ಮದ್ ಸುಲೈಮಾನ್   ಚಾಲನೆ  ನೀಡಿದರು.

ರಾಜ್ಯ ಅಧ್ಯಕ್ಷ ಎಸ್. ಎ  ಪುದಿಯವಳಪ್ಪಿಲ್ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ  ಕಾರ್ಯದರ್ಶಿ  ಆಹಮ್ಮದ್ ದೇವರಕುಳಂ, 

ರಾಜ್ಯ ಮುಖಂಡರಾದ ಇಸ್ಮಾಯಿಲ್, ಎನ್. ಕೆ ಅಬ್ದುಲ್ ಅಜೀಜ್ , ಅಜಿತ್ ಕುಮಾರ್ ಅಜಾದ್ ,    ಜುಬೈರ್ ಪಡುಪ್ಪು ಮೊದಲಾದವರು ಉಪಸ್ಥಿತರಿದ್ದರು 

ಯಾತ್ರೆ ಫೆಬ್ರವರಿ  ೧೩ ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. 

                                                      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News