ಕಾಸರಗೋಡು : ಅಸಹಿಷ್ಣುತೆ ಮತ್ತು ಸಮುದಾಯ ಧ್ರುವೀಕರಣ ದ ವಿರುದ್ದ ಜನ ಜಾಗ್ರತಾ ಯಾತ್ರೆ,
Update: 2016-01-30 20:19 IST
ಕಾಸರಗೋಡು : ಅಸಹಿಷ್ಣುತೆ ಮತ್ತು ಸಮುದಾಯ ಧ್ರುವೀಕರಣ ದ ವಿರುದ್ದ ಇಂಡಿಯನ್ ನೇಶನಲ್ ಲೀಗ್ ( ಐ ಎನ್ ಎಲ್ ) ರಾಜ್ಯ ಪ್ರಧಾನ ಕಾರ್ಯದರ್ಶಿ ಎ . ಪಿ ಅಬ್ದುಲ್ ವಹಾಬ್ ನೇತ್ರತ್ವದ ಜನ ಜಾಗ್ರತಾ ಯಾತ್ರೆ ಶನಿವಾರ ಸಂಜೆ ಕಾಸರಗೋಡಿನಿಂದ ಪ್ರಯಾಣ ಬೆಳೆಸಿತು.
ನಗರದ ಹೊಸ ಬಸ್ಸು ನಿಲ್ದಾಣ ಸಮೀಪ ನಡೆಯುವ ಸಮಾರಂಭದಲ್ಲಿ ಐ ಎನ್ ಎಲ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ಸುಲೈಮಾನ್ ಚಾಲನೆ ನೀಡಿದರು.
ರಾಜ್ಯ ಅಧ್ಯಕ್ಷ ಎಸ್. ಎ ಪುದಿಯವಳಪ್ಪಿಲ್ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಕಾರ್ಯದರ್ಶಿ ಆಹಮ್ಮದ್ ದೇವರಕುಳಂ,
ರಾಜ್ಯ ಮುಖಂಡರಾದ ಇಸ್ಮಾಯಿಲ್, ಎನ್. ಕೆ ಅಬ್ದುಲ್ ಅಜೀಜ್ , ಅಜಿತ್ ಕುಮಾರ್ ಅಜಾದ್ , ಜುಬೈರ್ ಪಡುಪ್ಪು ಮೊದಲಾದವರು ಉಪಸ್ಥಿತರಿದ್ದರು
ಯಾತ್ರೆ ಫೆಬ್ರವರಿ ೧೩ ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.