×
Ad

ಕಾಸರಗೋಡು; ಕನ್ನಡ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ

Update: 2016-02-01 18:18 IST

ಕಾಸರಗೋಡು : ಕೇರಳದಲ್ಲಿ ಆಡಳಿತ ಭಾಷೆಯಾಗಿ ಮಲಯಾಳಂ  ಕಡ್ಡಾಯಗೊಳಿಸುವ  ಹೊಸ ಮಸೂದೆಯಿಂದ ಕಾಸರಗೋಡು ಜಿಲ್ಲೆಯನ್ನು  ಹೊರತುಪಡಿಸುವಂತೆ   ಒತ್ತಾಯಿಸಿ ಕನ್ನಡ ಹೋರಾಟ ಕ್ರಿಯಾ ಸಮಿತಿ ವತಿಯಿಂದ  ನಾಳೆ ( ೨) ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಿದೆ.

ಬೆಳಿಗ್ಗೆ  ೯.೩೦ ಕ್ಕೆ  ವಿದ್ಯಾನಗರದಲ್ಲಿರುವ  ಸರಕಾರಿ ಕಾಲೇಜು ಪರಿಸರದಿಂದ  ಬ್ರಹತ್ ಮೆರವಣಿಗೆ ಹೊರಡಲಿದ್ದು ,  ಬಳಿಕ  ಧರಣಿ  ನಡೆಯಲಿದೆ.

ಪ್ರತಿಭಟನೆಯಲ್ಲಿ  ಕನ್ನಡ ಪರ ಸಂಘಟನೆಗಳು , ಅಧ್ಯಾಪಕರ ಸಂಘಟನೆ , ವಿದ್ಯಾರ್ಥಿಗಳು , ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News