ಮಂಗಳೂರು;ನರ್ಮ್ ಯೋಜನೆಯಡಿ ಬಸ್ ಸಂಪರ್ಕ ನಿಡಬೇಕೆಂದು ಆಗ್ರಹ

Update: 2016-02-01 13:13 GMT

 ಮಂಗಳೂರು,ಫೆ.1: ಮಂಗಳೂರು ತಾಲೂಕಿನ ಪೊರ್ಕೋಡಿ ಪ್ರದೇಶದ ಕೆಂಜಾರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಜನ ಸಂಪರ್ಕವಿದ್ದು ನೂರಾರು ವಿದ್ಯಾರ್ಥಿಗಳು, ದಿನಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ದಿನನಿತ್ಯ ವಾಹನ ಸಂಪರ್ಕವಿಲ್ಲದೆ ತೊಂದರೆಗೀಡಾಗಿದ್ದು ನರ್ಮ್ ಯೋಜನೆಯಡಿ ಬಸ್ ಸಂಪರ್ಕ ನಿಡಬೇಕೆಂದು ದಲಿತ ಹಕ್ಕುಗಳ ಸಮಿತಿಯ ಪೊರ್ಕೋಡಿ ಘಟಕದ ಸಂಚಾಲಕ ಚೆನ್ನಪ್ಪ ಸಾಲ್ಯಾನ್ ಆಗ್ರಹಿಸಿದ್ದಾರೆ.
   ಈ ಭಾಗದ ಸಾರ್ವಜನಿಕರು ಹಲವಾರು ಬಾರಿ ಹೋರಾಟ ಚಳುವಳಿ ಮಾಡಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಿನ ನರ್ಮ್ ಯೋಜನೆಯಡಿ ಬಸ್ ಸಂಪರ್ಕ ಒದಗಿಸಲು ಅವಕಾಶವಿದ್ದು ಈಗಲಾದರೂ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಬಹುದಾಗಿದೆ. ಈಗಿರುವ ಸ್ಟೇಟ್‌ಬ್ಯಾಂಕ್‌ನಿಂದ ಪೊರ್ಕೋಡಿ ಎರಡು ಬಸ್‌ಗಳು ಇದ್ದು ಅದನ್ನೇ ಅವಲಂಭಿಸಿರುವ ನಾಗರಿಕರು ತುರ್ತು ಸಮಯದಲ್ಲಿ ಸುಮಾರು ಒಂದುವರೆ ಗಂಟೆ ಮಂಗಳೂರಿಗೆ ತಲುಪುವ ಸಮಯವಿದ್ದು ಈ ಎರಡೇ ಬಸ್‌ಗಳನ್ನು ನಂಬಿ ಜನ ಕಾಯುವಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News