ಶಶಿ ತರೂರ್‌ರನ್ನು ಸುಳ್ಳು ಪತ್ತೆ ಪರೀಕ್ಷೆ?

Update: 2016-02-01 18:17 GMT

ಹೊಸದಿಲ್ಲಿ , ಫೆ.1: ಸುನಂದಾ ಪುಷ್ಕರ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಆಕೆ ಪತಿ ಮಾಜಿ ಸಚಿವ ಶಶಿ ತರೂರು ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ತನಿಖಾ ತಂಡ ಚಿಂತನೆ ನಡೆಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಶಿ ತರೂರು ಅವರ ಚಾಲಕ ಬಜರಂಗಿ ಮತ್ತು ನರೈನ್ ಸಿಂಗ್, ಕುಟುಂಬ ಸ್ನೇಹಿತ ಸಂಜಯ್ ದೇವನ್ ಮತ್ತು ವೈದ್ಯರನ್ನು ತನಿಖಾ ತಂಡ ಮತ್ತೆ ವಿಚಾರಣೆಗೊಳಪಡಿಸಲಿದೆ.
 ದಿಲ್ಲಿಯ ಲೀಲಾ ಪ್ಯಾಲೇಸ್ ಹೊಟೇಲ್‌ನ 345 ಸಂಖ್ಯೆಯ ಕೊಠಡಿಯಲ್ಲಿ 2014, ಜ. 17ರಂದು ಸುನಂದ ಪುಷ್ಕರ್ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಆಕೆಯ ಸಾವಿಗೆ ವಿಷ ಸೇವಿಸಿರುವುದು ಕಾರಣ ಎಂದು ವೈದ್ಯಕೀಯ ವರದಿಯಿಂದ ದೃಡಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News