×
Ad

ಅತ್ಯಾಚಾರ ಪ್ರಕರಣ: ದೂರು ದಾಖಲು

Update: 2016-02-06 14:35 IST

ಬಜ್ಪೆ, ಫೆ.6: 19ರ ಹರೆಯದ ಯುವತಿಯೊಬ್ಬಳನ್ನು 56 ಮುದುಕ ಬೆದರಿಸಿ ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕಟೀಲಿನಲ್ಲಿ ನಡೆದಿದೆ.


  ಆರೋಪಿಯನ್ನು ಕಟೀಲು ದೇವಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಟೀಲು ನಿವಾಸಿ ಹರೀಶ್ಚಂದ್ರ ರಾವ್ ಯಾನೆ ಅಪ್ಪು ಭಟ್ ಎಂದು ತಿಳಿದು ಬಂದಿದೆ.
 ಈತ ಮನೆಯ ಕೆಲಸಕ್ಕೆಂದು ಬರುತ್ತಿದ್ದ ಮನೆಯ ಸಮೀಪದ ಯುವತಿಯನ್ನು ಬೆದರಿಸಿ ನಿರಂತರ ಅತ್ಯಾಚಾರ ನಡೆಸಿದ್ದ. ಈ ವಿಚಾರವಾಗಿ ಮನನೊಂದು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ ನನ್ನನ್ನು ಹೆದರಿಸಿ ಬಲವಂತವಾಗಿ ಮತ್ತೆ ಕೆಲಸಕ್ಕೆ ಬರುವಂತೆ ಮಾಡಿದ್ದ. ಅಲ್ಲದೆ, ವಿಷಯ ಯಾರಲ್ಲದರೂ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.


 ಅತ್ಯಾಚಾರ ಎಸಗಿದ ಪರಿಣಾಮ ಯುವತಿ 6 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಮೊದಲು ದೂರು ನೀಡುವುದಾಗಿ ತಯಾರಿ ನಡೆಸುತ್ತಿರುವಾಗ ದೂರವಾಣಿ ಮೂಲಕ ನನ್ನನ್ನು ಮತ್ತು ನನ್ನ ಕುಟುಮಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಕಾರಣ ಹೆದರಿ ದೂರು ನೀಡಲಾಗಿಲ್ಲ ಎಂದು ಯುವತಿ ತಿಳಿಸಿದ್ದಾಳೆ.
ಯುವತಿಯ ದೂರು ಸ್ವೀಕರಿಸಿರುವ ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಕಳೆದ ಕೆಲದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗರ್ಭ ತೆಗೆಸಲು ತೆರಳಿದ್ದ ಸಂದರ್ಭ ವೈದ್ಯರು ನಿರಾಕರಿಸಿದ್ದ ಪರಿಣಾಮ ಪ್ರಕರಣ ಬೆಳಕಿಗೆ ಬಂದಿದ್ದು, ಆ ಬಳಿಕ ಸ್ಥಳೀಯರು ಸೇರಿ ಪ್ರಕರಣ ದಾಖಲಿಸುವಲ್ಲಿ ಸಫಲರಾದರು ಎಂದು ತಿಳಿದು ಬಂದಿದೆ.

ಪ್ರಕರಣ ಸ್ಥಳೀಯರಿಗೆ ತಿಳಿಯುತ್ತಿದ್ದಂತೆಯೇ ಯುವತಿ ಹಾಗೂ ಕುಟುಂಬವನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ರವಾನಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಸ್ಥಳೀಯರು ತೀವೃ ಹುಡುಕಾಡಿ ದೈರ್ಯ ತುಂಬಿದ ಪರಿಣಾಮ ಯುವತಿ ದೂರು ನೀಡಲು ಮುಂದಾದಳು ಎಂದು ತಿಳಿದು ಬಂದಿದೆ.


ಪತ್ನಿಯ ಕೊಲೆ: ಸ್ಥಳೀಯರಿಂದ ಬಲವಾದ ಶಂಕೆ
 ಇತ್ತೀಚೆಗೆ ಹರೀಶ್ಚಂದ್ರ ರಾವ್ ಅವರ ಪತ್ನಿ ನಾಗಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರು ದಾಖಲಾಗಿತ್ತು. ಆದರೆ, ನಾಗಲಕ್ಷ್ಮಿ ಗಂಡನ ಕಾಮ ಪುರಾಣ ತಿಳಿದು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಸಂಶಯ ವ್ಯಕ್ತ ಪಡಿಸಿರುವ ಸಾರ್ವಜನಿಕರು, ಕಾಮ ಪುರಾಣ ತಿಳಿದ ಪರಿಣಾಮ ಪತ್ನಿಯನ್ನು ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಬಲವಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News