ಮಂಗಳೂರು : ಬಜಾಲ್ ನಲ್ಲಿ ಭಾರೀ ಪ್ರಮಾಣದ ಗಾಂಜಾ ವಶ, ಮೂವರ ಬಂಧನ
ಅಬಕಾರಿ ಇಲಾಖೆಯ ತಪಾಸಣಾ ತಂಡವು ಬಜಾಲ್ ನಲ್ಲಿ ಭಾರೀ ಪ್ರಮಾಣದ ಗಾಂಜಾ ವಶಪಡಿಸಿ, ಮೂವರನ್ನು ಬಂಧಿಸಿದ್ದಾರೆ.
ಮಂಗಳೂರು, ನಗರದ ಜಲ್ಲಿಗುಡ್ಡೆಯ ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದುದನ್ನು ಅಬಕಾರಿ ಇಲಾಖೆಯು ಪತ್ತೆಹಚ್ಚಿ, 3 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳಿಂದ 50 ಗ್ರಾಂನ 10 ಪ್ಯಾಕೆಟ್ ಗಳು, 200 ಗ್ರಾಮನ 1 ಪ್ಯಾಕೆಟ್ ಮತ್ತು 5 ಗ್ರಾಂ ಗಳ 20 ಪ್ಯಾಕೆಟ್ಗಳಂತೆ ಒಟ್ಟು 800 ಗ್ರಾಂ ಗಾಂಜಾವನ್ನು ಇಲೆಕ್ಟ್ರಾನಿಕ್ ತಕ್ಕಡಿಯೊಂದಿಗೆ ವಶಪಡಿಸಿಕೊಳ್ಳಲಾಗಿದೆ. ದ.ಕ. ಜಿಲ್ಲೆಯ ಡಿ.ಸಿ. ಎಕ್ಸೈಜ್, ಎಲ್,ಎ ಮಂಜುನಾಥ್ರವರ ನಿರ್ದೇಶನದಂತೆ ಡೆಪ್ಯುಟಿ ಸುಪರಿಂಟೆಂಡೆಂಟ್ ಡಾ| ಆಶಾಲತಾ ರವರ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ಕುದ್ರೋಳಿ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡೆಪ್ಯಟಿ ಸುಪರಿಂಟೆಂಡೆಂಟ್ ವಿ. ಚಂದ್ರಪ್ಪ, ಇನ್ಸ್ ಪೆಕ್ಟರ್ ಅಮರನಾಥ್ ಎಸ್.ಎಸ್. ಭಂಡಾರಿ, ಇನ್ಸ್ ಪೆಕ್ಟರ್ ಚೇತನ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಚಂದ್ರಹಾಸ್ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಜಯಪ್ಪ ಲಮಾಣಿ, ಕೃಷ್ಣ ಆಚಾರ್, ಆನಂದ್ ಗಾಜಿ ಹಾಜರಿದ್ದರು.
ಆರೋಪಿಗಳಾದ ಚಮದು ಯಾನೆ ವೆಂಕಟೇಶ್ ಜಲ್ಲಿಗುಡ್ಡೆ, ಅವಿನಾಶ್ ಪಡೀಲ್, ನೌಫಲ್ ಜಲ್ಲಿಗುಡ್ಡೆ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜಫ್ತಾದ ಸೊತ್ತುಗಳ ಅಂದಾಜು ಮೊತ್ತ 50,000 ಆಗಬಹುದಾಗಿದೆ.