ಕಾಸರಗೋಡು : ಅಕ್ರಮ ಮರಳುಗಾರಿಕೆ, ಹತ್ತು ದೋಣಿಗಳ ವಶ
Update: 2016-02-06 18:33 IST
ಕಾಸರಗೋಡು : ಅಕ್ರಮವಾಗಿ ಮರಳುಗಾರಿಕೆ ಅಡ್ಡೆಗಳಿಗೆ ಕರಾವಳಿ ಪೊಲೀಸರು ನಡೆಸಿದ ದಾಳಿಯಿಂದ ಹತ್ತು ದೋಣಿಗಳನ್ನೂ ವಶಪಡಿಸಿಕೊಂಡಿದ್ದಾರೆ.
ನೆಲ್ಲಿಕುಂಜೆ, ಪ ಳ್ಳ೦, ತುರುತ್ತಿ, ಬಾಂಗೋಡ್ ತೀರಗಳಿಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ . ಎ . ಶ್ರೀನಿವಾಸ್ ರವರ ನಿರ್ದೇಶನದಂತೆ ದಾಳಿ ನಡೆಸಲಾಗಿದ್ದು
ದಾಖಲೆಗಳಿಲ್ಲದೆ ಮರಳುಗಾರಿಕೆ ನಡೆಸುತ್ತಿದ್ದ ಹತ್ತು ದೋಣಿ ಗಳನ್ನು ವಶಪಡಿಸಿಕೊಳ್ಳಲಾಯಿತು. ರಾತ್ರಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿತ್ತು . ಮರಳು ಗಾರಿಕೆ ಬಳಿಕ ದೋಣಿಗಳನ್ನು ಕಾಂಡ್ಲಾ ಪೊದೆ ಗಳಡಿಯಲ್ಲಿ ಬಚ್ಚಿಡಲಾಗಿತ್ತು.
ಅಕ್ರಮ ಮರಳು ಕೇಂದ್ರಗಳಿಗೆ ಮುಂದಿನ ದಿನಗಳಲ್ಲೂ ದಾಳಿ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.