ಬಂಟ್ವಾಳ: ಮುಸ್ಲಿಮ್ ಧರ್ಮಗುರು ನೀರುಪಾಲು

Update: 2016-02-07 07:39 GMT

ಬಂಟ್ವಾಳ, ಫೆ.7: ನದಿ ದಾಟುತ್ತಿದ್ದ ವೇಳೆ ಮುಸ್ಲಿಮ್ ಧರ್ಮಗುರುವೊಬ್ಬರು ನೀರುಪಾಲಾದ ಘಟನೆ ತಾಲೂಕಿನ ಸಂಗಬೆಟ್ಟುವಿನಲ್ಲಿ ಶನಿವಾರ ರಾತ್ರಿ ನಡೆದಿದೆ. ಪುತ್ತೂರು ಬನ್ನೂರು ನಿವಾಸಿ ಮುಹಮ್ಮದ್ ಅಫ್ರೀದ್(23) ನೀರುಪಾಲಾದವರು. ಅವರು ನಿನ್ನೆ ರಾತ್ರಿ ಸಂಗಬೆಟ್ಟು ಗಾಡಿಪಲ್ಕೆಯಿಂದ ಇರುವೈಲ್ ಮಸೀದಿಗೆ ತೆರಳಲೆಂದು ಫಲ್ಗುಣಿ ನದಿ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರುಪಾಲಾಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ರಕ್ಷಿತ್ ಎ.ಕೆ. ನೇತೃತ್ವದಲ್ಲಿ ಪೊಲೀಸ್‌ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರವಿವಾರವೂ ಅಫ್ರೀದ್‌ಗಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News