ವಿಟ್ಲ : ಪೆರಾಜೆ-ನೇರಳಕಟ್ಟೆಯ ಕೇಸರಿ ಫ್ರೆಂಡ್ಸ್ ಆಶ್ರಯದಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ

Update: 2016-02-08 15:04 GMT

ವಿಟ್ಲ : ಪೆರಾಜೆ-ನೇರಳಕಟ್ಟೆಯ ಕೇಸರಿ ಫ್ರೆಂಡ್ಸ್ ಆಶ್ರಯದಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವು ಭಾನುವಾರ ನೇರಳಕಟ್ಟೆಯಲ್ಲಿ ನಡೆಯಿತು. ಪಂದ್ಯಾಟವನ್ನು ಡಾ. ವೈ. ಗಣರಾಜ್ ಎಲ್ಕಣ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು ಅಧ್ಯಕ್ಷತೆ ವಹಿಸಿದ್ದರು.

ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯರಾದ ಡಿ. ತನಿಯಪ್ಪ ಗೌಡ, ಪ್ರೇಮನಾಥ ಶೆಟ್ಟಿ ಮೂಡಾಯೂರು, ಕೆದಿಲ ಗ್ರಾ.ಪಂ. ಸದಸ್ಯ ಉಮೇಶ್ ಮುರುವ, ಡೊಂಬಯ್ಯ ನಾಯ್ಕ, ನೆಲ್ಯಾಡಿ ಬೆಥನಿ ಕಾಲೇಜು ಉಪನ್ಯಾಸಕ ಚಂದ್ರಶೇಖರ, ನೇರಳಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ವಾಮನ ಕುಲಾಲ್ ಮಿತ್ತ ಪೆರಾಜೆ, ನೇರಳಕಟ್ಟೆ ಸಿ.ಎ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನಕರ ನಾಯಕ್, ಬಾಬನಕಟ್ಟೆ ಶಾಖಾಧಿಕಾರಿ ಮೋಹನ್ ಕುಲಾಲ್, ಪ್ರಮುಖರಾದ ಮಂಜುನಾಥ ನೇರಳಕಟ್ಟೆ, ಬೇಬಿ ನಾಯ್ಕೆ ನೇರಳಕಟ್ಟೆ, ಪದ್ಮನಾಭ ಕುಲಾಲ್ ಪೆರಾಜೆ, ಭೋಜ ನಾರಾಯಣ, ವಿಶು ಕುಮಾರ್, ಎನ್.ಎಚ್. ಇಸ್ಮಾಯಿಲ್, ಚಂದ್ರಶೇಖರ್ ಕುಲಾಲ್, ಕರೀಂ ಒಕ್ಕೆತ್ತೂರು, ಹಕೀಂ ನೆಡ್ಯಾಲು, ಫಝಲ್ ಸಾಹೇಬ್ ಮೊದಲಾದವರು ಭಾಗವಹಿಸಿದ್ದರು. ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಕುಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಪೂಜಾರಿ ವಂದಿಸಿದರು. ಶಾಕಿರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. 

ಪೆರಾಜೆ ತಂಡಕ್ಕೆ ಪ್ರಶಸ್ತಿ :

ಪಂದ್ಯಾಟದಲ್ಲಿ ಆಂಜನೇಯ ಫ್ರೆಂಡ್ಸ್ ಪೆರಾಜೆ ಪ್ರಥಮ ಸ್ಥಾನವನ್ನು ಹಾಗೂ ಯುವಕ ಮಂಡಲ ಮಾಣಿ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಆಂಜನೇಯ ಫ್ರೆಂಡ್ಸ್ ಪೆರಾಜೆ ತಂಡದ ಯತೀಶ್ ಆಚಾರ್ಯ ಆಲ್‌ರೌಂಡರ್, ರಾಜೇಶ್ ಉತ್ತಮ ಎತ್ತುಗಾರ ಹಾಗೂ ಯುವಕ ಮಂಡಲ ಮಾಣಿ ತಂಡದ ಪ್ರಣಾಮ್ ಉತ್ತಮ ಹೊಡೆತಗಾರ ಪ್ರಶಸ್ತಿಗಳನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News