×
Ad

ಚುನಾವಣಾ ಬಹಿಷ್ಕಾರ ನಿರ್ಧಾರ ಹಿಂತೆಗೆತಕ್ಕೆ ಪೈಂಬೆಚ್ಚಾಲು ನಿವಾಸಿಗಳ ನಕಾರ

Update: 2016-02-09 18:02 IST

ಸುಳ್ಯ: ಆಲೆಟ್ಟಿ ಗ್ರಾಮದ ಕೋಲ್ಚಾರು-ಪೈಂಬೆಚಾಲು-ಅಜ್ಜಾವರ ಸಂಪರ್ಕ ರಸ್ತೆ ಅಭಿವೃದ್ಧಿ ಬೇಡಿಕೆ ಹಾಗೂ ಪೈಂಬೆಚ್ಚಾಲಿನಿಂದ ಮಂಡೆಕೋಲಿಗೆ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಮುಂದಿರಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪೈಂಬೆಚ್ಚಾಲಿಗೆ ಚುನಾವಣಾಧಿಕಾರಿಗಳು ಭೇಟಿ ನೀಡಿದರು.

ಈ ರಸ್ತೆಗೆ ಸುಮಾರು 20 ವರ್ಷಗಳಿಂದ ಕಾಮಗಾರಿ ನಡೆಯದೇ, ಜನಪ್ರತಿನಿಧಿಗಳು ಚುನಾವಣೆಯ ಸಂದರ್ಭ ಮಾತ್ರ ಭೇಟಿ ನೀಡಿ ರಸ್ತೆ ಅಭಿವೃದ್ಧಿಯ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಕಾಮಗಾರಿ ನಡೆದಿಲ್ಲ ಎಂದು ಈ ಭಾಗದ ಜನರು ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದರು. ಇದಕ್ಕಾಗಿ ಪೈಂಬೆಚ್ಚಾಲು ನಾಗರಿಕಾ ಹಿತರಕ್ಷಣಾ ಸಮಿತಿಯನ್ನೂ ರಚಿಸಿದ್ದರು. ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್‌ರಿಗೆ ಮನವಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅರುಣಪ್ರಭ, ತಹಶೀಲ್ದಾರ್ ಅನಂತಶಂಕರ್, ಸರ್ಕಲ್ ಇನ್‌ಸ್ಪೆಕ್ಟರ್ ಬಿ.ಎಸ್.ಸತೀಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಆಲೆಟ್ಟಿ ಗ್ರಾ.ಪಂ. ಪಿಡಿಓ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ನರಿಯಪ್ಪ ಮಠದ, ಗ್ರಾ.ಪಂ. ಸದಸ್ಯ ಸುದರ್ಶನ್ ಪಾತಿಕಲ್ಲು ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ರಸ್ತೆಯನ್ನು ಮತ್ತು ಸೇತುವೆ ನಿರ್ಮಾಣದ ಸ್ಥಳವನ್ನು ವೀಕ್ಷಿಸಿದ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಜನರ ಭಾವನೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಆದರೆ ಇದನ್ನೊಪ್ಪದ ಗ್ರಾಮಸ್ಥರು ಜನಪ್ರತಿನಿಧಿಗಳಿಂದ ನಮಗೆ ಭರವಸೆ ಮಾತ್ರ ದೊರೆತಿದೆ. ಹೀಗಾಗಿ ಬೇಡಿಕೆ ಈಡೇರುವವರೆಗೆ ಚುನಾವಣಾ ಬಹಿಷ್ಕಾರ ಅನಿವಾರ್ಯವಾಗಿದೆ ಎಂದು ಹೇಳಿದರು. ಬಳಿಕ ಅಧಿಕಾರಿಗಳು ಹಿಂದಿರುಗಿದರು.

ಚುನಾವಣಾ ಬಹಿಷ್ಕಾರ ಮಾಡುವ ತಮ್ಮ ನಿಲುವಿನಿಂದ ಗ್ರಾಮಸ್ಥರು ಹಿಂದೆ ಸರಿದಿಲ್ಲ. ಪೈಂಬೆಚ್ಚಾಲು ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಗೌಡ ಕಾರ್ತಡ್ಕ, ಕಾರ್ಯದರ್ಶಿ ಚಂದ್ರಶೇಖರ ಕೋಲ್ಚಾರ್, ಅಬ್ದುಲ್ ಪಿ.ಎಂ. ಪೈಂಬೆಚಾಲು, ಗೌರವಾಧ್ಯಕ್ಷ ಬಿ.ಎಂ.ಮಹಮ್ಮದ್, ಉಪಾಧ್ಯಕ್ಷರುಗಳಾದ ಲೋಹಿತಾಶ್ವ ಪರಮಂಡಲ, ಶ್ರೀಧರ ಕೂಳಿಯಡ್ಕ, ಚಿನಪ್ಪ ಕರ್ಲಪ್ಪಾಡಿ, ಹಸೈನಾರ್ ಹಾಜಿ ತೋಟಕೊಚ್ಚಿ, ಪುರುಷೋತ್ತಮ ಕದಿಕಡ್ಕ ಕುಡೆಂಬಿ, ಜೊತೆಕಾರ್ಯದರ್ಶಿ ಅಬ್ದುಲ್ ಆಲಿ ಪೈಂಬೆಚ್ಚಾಲು, ಯೋಗೀಶ ಹಾಸ್ಪಾರೆ, ಆನಂದ ಕೂಳಿಯಡ್ಕ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಮೂಸಾ ಕುಂಞಿ ಪೈಂಬೆಚ್ಚಾಲು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News