ಜಾರ್ಕಂಡ್‌ನಲ್ಲಿ ಮೂರ್ತಿ ವಿಸರ್ಜನೆ ವೇಳೆ ಅಪಘಾತ:ಹನ್ನೆರಡು ಸಾವು, ಹದಿನೈದು ಮಂದಿಗೆ ಗಾಯ

Update: 2016-02-15 06:30 GMT

ಗಿರ್ಡಿಹ್/ ಜಾರ್ಕಂಡ್‌: ಗಿರ್ಡಿಹ್ ಜಿಲ್ಲೆ ಮತ್ತು ಬಗೊದರ್ ನಡುವೆ ಇರುವ ಗ್ರಾಂಡ್ ಟ್ರಂಕ್ ರಸ್ತೆಯಲ್ಲಿ ಇಂದು ದುರದೃಷ್ಟಕರವಾಗಿ ಭಾರೀವಾಹನವೊಂದು ಮೂರ್ತಿ ವಿಸರ್ಜನೆಗೆ ತೆರಳುತ್ತಿದ್ದವರ ಮೇಲೆಹರಿದು 12 ಮಂದಿಯ ಸಾವಿಗೆ ಕಾರಣವಾಗಿದೆ ಹಾಗೂ 15 ಮಂದಿಗಾಯಗೊಂಡಿದ್ದಾರೆ.

ಗಿರ್ಡಿಹ್ ಉಪಾಯುಕ್ತ ಉಮಾಶಂಕರ್ ಸಿಂಗ್ ಘಟನೆಯ ಕುರಿತು ವಿವರಿಸುತ್ತಾ ಒಂದು ಟ್ರೇಲರ್-ಟ್ರಕ್ ಚಾಲಕ ತನ್ನ ನಿಯಂತ್ರಣವನ್ನು ಕಳೆದುಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಸಿವಿಲ್ ಸರ್ಜನ್ ಎಸ್ ಸನ್ಯಾಲ್‌ರು ಎಂಟು ಜನರು ಸ್ಥಳದಲ್ಲೇ ಮೃತರಾಗಿದ್ದು ಇಬ್ಬರು ಬಗೋದರ್ ಆಸ್ಪತ್ರೆಯಲ್ಲಿ ಮೃತರಾದರು ಓರ್ವ ವ್ಯಕ್ತಿ ಧನ್‌ಬಾದ್ ಹಝಾರಿಬಾದ್ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ರಘುವರ್ ದಾಸ್ ಘಟನೆಯ ಕುರಿತು ಶೋಕ ವ್ಯಕ್ತಪಡಿಸಿದ್ದಾರೆ. ಅವರು ಸ್ಥಳೀಯ ಶಾಸಕ ಹಾಗೂ ಜಿಲ್ಲಾಡಳಿತಕ್ಕೆ ಪರಿಹಾರ ಕಾರ್ಯದಲ್ಲಿ ನೆರವಾಗಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News