ಕಾಸರಗೋಡು : ಬಿ ಜೆಪಿ ಮತ್ತು - ಸಿ ಪಿ ಎಂ ಕಾರ್ಯಕರ್ತರೊಳಗೆ ನಡೆದ ಘರ್ಷಣೆ-ನಾಲ್ವರಿಗೆ ಇರಿತ, 11 ಮಂದಿಗೆ ಗಾಯ
ಕಾಸರಗೋಡು : ಬಿ ಜೆಪಿ ಮತ್ತು - ಸಿ ಪಿ ಎಂ ಕಾರ್ಯಕರ್ತರೊಳಗೆ ನಡೆದ ಘರ್ಷಣೆಯಲ್ಲಿ ನಾಲ್ವರು ಇರಿತಕ್ಕೊಳಗಾಗಿದ್ದು, ಒಟ್ಟು ೧೧ ಮಂದಿ ಗಾಯಗೊಂಡ ಘಟನೆ ಅಜನೂರಿನಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ.
ಹಿಂಸಾಚಾರದಿಂದ ಒಂಭತ್ತು ಮನೆಗಳಿಗೆ ಹಾನಿಗೊಳಿಸ ಲಾಗಿದ್ದು , ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ರಾತ್ರಿ ಸಿಪಿಎಂ ಕಾರ್ಯಕರ್ತರ ಮೇಲೆ ಬಿ ಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು , ಬಳಿಕ ಹಿಂಸಾಚಾರ ಸ್ಪೋಟಗೊಂಡಿದೆ . ಗಾಯಗೊಂಡವರಲ್ಲಿ ಸಿ ಪಿ ಎಂ ಕಾರ್ಯಕರ್ತರಾದ ಬಿಜೇಶ್ , ಕೃಪೇಶ್ , ಮಿಥುನ್ , ಶೈಜು ಒಳಗೊಂಡಿದ್ದಾರೆ.
ದೇವಸ್ಥಾನಕ್ಕೆ ತೆರಳಿ ಮರಳು ತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ . ಬಿಜೇಶ್ ನನ್ನು ಪರಿಯಾರಂ ಮತ್ತು ಉಳಿದಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೆ ಪ್ರತಿಕಾರವಾಗಿ ಬಿ ಜೆ ಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಬಿ ಜೆ ಪಿ ಕಾರ್ಯಕರ್ತರಾದ ಪೊಯ್ಯಕ್ಕರೆಯ ಶ್ರೀಧರನ್ , ಸುಕುಮಾರನ್ ರವರದ್ದು ಸೇರಿದಂತೆ 9 ಮನೆ ಗಳಿಗೆ ಹಾನಿಗೊಳಿಸಲಾಗಿದೆ.
ಸಿಪಿಎಂ ಕಾರ್ಯಕರ್ತ ಅಜೀಶ್ ರವರ ಅಟೋ ಮತ್ತು ರವಿಯವರ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. ಸ್ಥಳೀಯ ಬಿಜೆಪಿ ಕಛೇರಿಯನ್ನು ಧ್ವಂಸಗೊಳಿಸಲಾಗಿದೆ.
ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎ . ಶ್ರೀನಿವಾಸ್ ಮೇಲ್ನೋಟದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.