×
Ad

ಕಾಸರಗೋಡು : ಮಂಜೇಶ್ವರ ಗೋವಿಂದ ಪೈ ಯವರ ಸ್ಮರಣಾರ್ಥ ನಿರ್ಮಿಸಲಾಗುತ್ತಿರುವ ಗಿಳಿವಿಂಡು ಮಾರ್ಚ್ 5ರಂದು ಉದ್ಘಾಟನೆ

Update: 2016-02-15 19:42 IST

ಕಾಸರಗೋಡು :  ಮಂಜೇಶ್ವರ  ಗೋವಿಂದ ಪೈ ಯವರ  ಸ್ಮರಣಾರ್ಥ  ನಿರ್ಮಿಸಲಾಗುತ್ತಿರುವ  ಗಿಳಿವಿಂಡು  ಮಾರ್ಚ್ ಐದರಂದು  ಉದ್ಘಾಟನೆಗೊಳ್ಳಲಿದೆ.
ಮಾರ್ಚ್ ಐದು ಮತ್ತು ಆರರಂದು  ಉದ್ಘಾಟನಾ ಕಾರ್ಯಕ್ರಮ  ನಡೆಯಲಿದೆ. 
ಈ  ಕುರಿತು  ಕೇಂದ್ರ ಮಾಜಿ  ಸಚಿವ  ಎಂ. ವೀರಪ್ಪ ಮೊಯ್ಲಿ ಯವರ  ಅಧ್ಯಕ್ಷತೆಯಲ್ಲಿ ಕವಿ ಭವನದಲ್ಲಿ ನಡೆದ  ನಡೆದ  ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೇರಳ - ಕರ್ನಾಟಕ ದ  ಮುಖ್ಯಮಂತ್ರಿಗಳು , ಸಾಂಸ್ಕೃತಿಕ  ಸಚಿವರು , ಜಿಲ್ಲಾಧಿಕಾರಿ ಹಾಗೂ ಇನ್ನಿತರ ಜನಪ್ರತಿನಿಧಿಗಳು ಉಪಸ್ಥಿತರಿರುವರು.
ಗೋವಿಂದ ಪೈ ಯವರ ವಸತಿ ಸಮೀಪ  ಗಿಳಿವಿಂಡು ಸಾಂಸ್ಕೃತಿಕ  ಕೇಂದ್ರ ಮತ್ತು  ಭವನಿಕಾ ಸಭಾಂಗಣ ನಿರ್ಮಿಸಲಾಗುತ್ತಿದೆ.  ಕವಿಯವರ  ವಸತಿಯನ್ನು  ನವೀಕರಿಸಿ  ಕವಿ ಸ್ಮಾರಕವಾಗಿ ಉಳಿಸಲಾಗುವುದು.  ಗೋವಿಂದ ಪೈ ಯವರ   ಪುಸ್ತಕಗಳನ್ನು  ಎನ್  ಐ ಸಿ ಯ  ಸಹಯೋಗದೊಂದಿಗೆ   ಡಿಜಿಲೈಸ್ ಗೊಳಿಸಿ ಮಾಡಿ  ಕವಿಭವನದಲ್ಲಿ   ಇಡಲು ತೀರ್ಮಾನಿಸಲಾಯಿತು. 
ಸಭೆಯಲ್ಲಿ  ಹೆಚ್ಚುವರಿ  ಎಚ್ . ದಿನೇಶನ್,  ಮೇನಜಿಂಗ್  ಟ್ರಸ್ಟಿ  ಡಿ. ಕೆ  ಚೌಟ,   ಜಿಲ್ಲಾ  ವಾರ್ತಾಧಿಕಾರಿ ಕೆ. ಟಿ ಶೇಖರ್ ,  ಎಂ , ಜೆ  ಕಿಣಿ ,  ತೇಜೋಮಯ, ಜಯಲಕ್ಷ್ಮಿ,  ಬಿ . ವಿ ಕಕ್ಕಿಲ್ಲಾಯ ,  ಕೆ . ಆರ್  ಜಯಾನಂದ ,  ಡಾ. ರಮಾನಂದ ಬನಾರಿ,  ಶಶಿಧರ್ ಶೆಟ್ಟಿ , ಪಿ. ಆರ್  ಸುಭಾಶ್ ಶ್ಚ೦ದ್ರ,  ಸುದರ್ಶನ , ಪಿ. ಜಿ ಥಾಮಸ್,  ಸುಬ್ಬಣ್ಣ   ರೈ, ಆರ್ . ಭರತ್ ತಂತ್ರಿ , ಸತ್ಯನಾರಾಯಣ  ತಂತ್ರಿ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News