×
Ad

ಹರ್ಯಾಣದಲ್ಲಿ ಹಿಂಸೆಗೆ ತಿರುಗಿದ ಜಾಟ್ ಸಮುದಾಯದ ಚಳವಳಿ; ಪೊಲೀಸರ ಗುಂಡಿಗೆ ಓರ್ವ ಬಲಿ

Update: 2016-02-19 17:44 IST

ಚಂಡೀಗಢ, ಫೆ.19: ಹಿಂದುಳಿದ ಸಮುದಾಯಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಜಾಟ್ ಸಮುದಾಯದವರು ಹರ್ಯಾಣದಲ್ಲಿ ನಡೆಸುತ್ತಿರುವ ಚಳುವಳಿಯು ಇಂದು ಹಿಂಸೆಗೆ ತಿರುಗಿದ್ದು, ರೋಹ್ಟಕ್‌-ದಿಲ್ಲಿ ಬೈಪಾಸ್‌ ಬಂದ್‌ ಮಾಡಿ ಗೃಹ ಸಚಿವರ ಮನೆಗೆ ದಾಳಿ ಮಾಡಿದ ಚಳವಳಿಗಾರರನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ ಪರಿಣಾಮವಾಗಿ, ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಇದೇ ವೇಳೆ ಪ್ರತಿಭಟನೆಕಾರರು ಪೊಲೀಸ್‌ ಜೀಪೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಕಳೆದ ಹಲವು ದಿನಗಳಿಂದ ಜಾಟ್ ಸಮುದಾಯವನ್ನು ಹಿಂದುಳಿದ ಪ್ರವರ್ಗಕ್ಕೆ ಸೇರಿಸದಿರುವುದನ್ನು ವಿರೋಧಿಸಿ ಸಮುದಾಯದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಭಟನೆ ಇಂದು ಕೂಡ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಸರಕಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ಸರಕಾರದ ಪ್ರಸ್ತಾಪ ತಿರಸ್ಕಾರ: ಜಾಟ್ ಸಮುದಾಯದವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಬೇಡಿಕೆಯ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿ ಮನೋಹರ್‌ ಕಟ್ಟರ್‌  ಇಂದು ಕರೆದಿದ್ದ ಸಭೆಯಲ್ಲಿ  ಆರ್ಥಿಕವಾಗಿ ಮೀಸಲಾತಿ ನೀಡುವ ಸರಕಾರದ ಪ್ರಸ್ತಾಪವನ್ನು ತಿರಸ್ಕರಿಸಿರುವ ಜಾಟ್‌ ಸಮುದಾಯದವರು ತಮ್ಮನ್ನು ಒಬಿಸಿಗೆ ಸೇರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ. ಇದರಿಂದಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News