ಕುಟುಂಬದವರಿಂದ ತ್ಯಜಿಸಲ್ಪಟ್ಟ ಶವಕ್ಕೆ ಪಂಚಾಯತ್ ನಿಂದ ದಫನ ಕಾರ್ಯ

Update: 2016-02-23 11:22 GMT

ನಾಟಕಕಾರನೊಬ್ಬ ಸತ್ತಾಗ ಅವನ ಶವ ಪಡೆಯಲಿಕ್ಕೂ ಅಮ್ಮ-ಪತ್ನಿ-ಮಗ ಯಾರೂ ಬರಲಿಲ್ಲ: ಕೊನೆಗೂ ಶವಸಂಸ್ಕಾರಕ್ಕೆ ಮುಂದಾದ ಸ್ಥಳೀಯ ಪಂಚಾಯತ್!

ಕೊಚ್ಚಿ; ಪತ್ನಿ ಮತ್ತುಮಗ ಮೃತ ದೇಹವನ್ನು ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಒಂದುವಾರಕ್ಕೂ ಹೆಚ್ಚು ದಿನಗಳಲ್ಲಿ ಕೊಟ್ಟಯಂ ಮೆಡಿಕಲ್ ಕಾಲೇಜ್ ಶವಾಗಾರದಲ್ಲಿ ಅನಾಥವಾದ ಪ್ರಮುಖ ನಾಟಕಕಾರ ಕೃಷ್ಣಮುರಳಿಯ ಮೃತದೇಹವನ್ನು ಕೊನೆಗೂ ದೂರದ ಸಂಬಂಧಿಕರು ಮತ್ತು ಮಗಳ ಪತಿ ಸೇರಿ ಪಡೆದುಕೊಂಡಿದ್ದಾರೆ. ಊರಿಗೆ ತರದೆ ಮೃತದೇಹವನ್ನು ಕೊಟ್ಟಯಂನ ಸಾರ್ವಜನಿಕಸ್ಮಶಾನದಲ್ಲಿ ದಫನಕಾರ್ಯ ಡೆಸಲು ನಿರ್ಧರಿಸಿದ್ದಾರೆ.


  ಇಪ್ಪತ್ತೊಂದು ವರ್ಷಗಳಿಂದ ಕುಟುಂಬದತ್ತ ತಿರುಗಿ ನೋಡದಿದ್ದ ವ್ಯಕ್ತಿ ಕೃಷ್ಣಮುರಳಿ ಎಂದು ಹೇಳಿ ಪತ್ನಿ ಮತ್ತುಮಗ ಮೃತದೇಹವನ್ನು ಸ್ವೀಕರಿಸಲು ಸಿದ್ಧರಾಗಲಿಲ್ಲ. ಆದ್ದರಿಂದ ಶವಾಗಾರದಲ್ಲಿ ಇರಿಸಿ ಒಂದು ವಾರದಿಂದ ಅನಾಥವಾಗಿತ್ತು. ಎರಡುವರ್ಷ ಮೊದಲು ವಾಹನ ಅಪಘಾತದಲ್ಲಿ ಮರಳಿಯವರು ಒಂದು ಕಾಲನ್ನು ಕಳಕೊಳ್ಳಬೇಕಾಯಿತು.ಜೊತೆಗೆಕಿಡ್ನಿ ತಕರಾರು ಸಂಭವಿಸಿ ಕಳೆದ ಹದಿನೈದನೆ ತಾರೀಕಿನಂದು ಮರಣವಪ್ಪಿದ್ದರು. ಅವರು ಮೃತರಾದ ಸುದ್ದಿ ಕುಟುಂಬಕ್ಕೆ ಮೆಡಿಕಲ್ ಕಾಲೇಜು ಅಧಿಕಾರಿಗಳು ತಿಳಿಸಿದರೂ ಮೃತದೇಹವನ್ನು ಪಡೆಯಲು ಮನೆಯಿಂದ ಯಾೂ ಬಂದಿರಲಿಲ್ಲ.
 
ಈ ವಿಷಯ ಅರಿತು ಕೃಷ್ಣಮುರಳಿಯ ಊರಾದ ಅಲುವಾ ಸೌತ್ ಪಂಚಾಯತ್ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಊರವರು ಇಂದು ಬೆಳಗ್ಗೆ ಕೊಟ್ಟಯಂ ಮೆಡಿಕಲ್ ಕಾಲೇಜ್‌ಗೆ ಬಂದು ಮೃತದೇಹ ಸಂಸ್ಕಾರಕ್ಕೆ ಏರ್ಪಾಡು ಮಾಡಿದ್ದಾರೆ. ಇಂದು ಅವರ ಶವಸಂಸ್ಕಾರ ನಡೆಯಲಿದೆ ಎಂದು ಪಂಚಾಯತ್ ಸದಸ್ಯ ಕಕ್ಕಾಟಿಲ್ ನಸೀರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನಾಟಕಕಾರಣನಾಗಿದ್ದ ಕೃಷ್ಣಮುರಳಿ ಆ ಹುಚ್ಚಿನಲ್ಲಿ ಇ.ಎಸ್.ಐ ಡಿಸ್ಪೆನ್ಸರಿಯಲ್ಲಿ ಇದ್ದ ಸರಕಾರಿ ಕೆಲಸಕ್ಕೆ ರಾಜಿನಾಮೆ ಇತ್ತಿದ್ದರು. ಎರಡನೆ ಮಗು ಮನು ಹುಟ್ಟಿ ಒಂದು ತಿಂಗಳಾಗುವ ಮೊದಲೇ ಹೆಂಡತಿ ಮಕ್ಕಳನ್ನು ಬಿಟ್ಟು ಅವರು ನಾಟಕದಲ್ಲಿ ತೊಡಗಿಸಿಕೊಂಡಿದ್ದರು. ನಾಟಕ ರಚನಾಕಾರ, ನಿರ್ದೇಶಕ, ನಟ ಎಲ್ಲವೂ ಆಗಿ ಕೃಷ್ಣಮುರಳಿ ಸಾವಿರಕ್ಕೂ ಅಧಿಕ ವೇದಿಕೆಯಲ್ಲಿ ಪ್ರಕಟವಾಗಿದ್ದರು. ಒಂದು ವೇದಿಕೆಯಿಂದ ಇನ್ನೊಂದು ವೇದಿಕೆಗೆ ಓಡಾಟದಲ್ಲಿ ಕೃಷ್ಣಮುರಳಿ ಕುಟುಂಬವನ್ನು ಮರೆತು ಬಿಟ್ಟಿದ್ದರು. ತನ್ನ ವೃದ್ಧೆ ತಾಯಿ ಪುಟ್ಟ ಇಬ್ಬರು ಮಕ್ಕಳು ಪತ್ನಿಯನ್ನು ಬಿಟ್ಟು ಅವರು ಚೆಂಞನಶ್ಶೇರಿಗೆ ವಾಸ ಬದಲಿಸಿದರು. ಆಲುವದ ರಚನಾ, ಅಂಗಮಾಲಿ ಪೌರ್ಣಮಿ. ಕೋತಮಂಗಲಂ ಆರತಿ, ವರ್ಕಲ ಭೂಮಿಕ, ಒಚ್ಚಿರ ನಿಲ,ಮುಂತಾದ ರಂಗ ತಂಡಗಳಲ್ಲಿ ಅವರು ನಾಟಕ ಸೇವೆ ನಡಿಸಿದ್ದರು. 2014ರಲ್ಲಿ ಆಲುವ ಕೆಎಸ್ಸಾರ್ಟಿಸಿ ಬಸ್‌ಸ್ಟ್ಯಾಂಡ್‌ನಲ್ಲಿ ಹಿಂದಕ್ಕೆ ತೆಗೆದ ಬಸ್‌ನಡಿಗೆ ಬಿದ್ದು ಕೃಷ್ಣಮೂರ್ತಿಯವರ ಬಲಕಾಲನ್ನು ಮೊಣಕಾಲಿಂದ ಕೆಳಕ್ಕೆ ಕತ್ತರಿಸಬೇಕಾಯಿತು. ಆನಂತರ ಅವರ ನಾಟಕದ ಓಟ ನಿಂು ಹೋಗಿತ್ತು. ಜೊತೆಗೆ ಕಿಡ್ನಿ ಡಯಾಲಿಸಿಸ್ ಮಾಡಬೇಕಿತ್ತು. ಕೈಯಲ್ಲಿದ್ದ ಹಣವೆಲ್ಲ ಮುಗಿದುಹೋಗಿತ್ತು. ಕೆಲವು ಗೆಳೆಯರ ಸಹಾಯದಿಂದ ಆನಂತರ ಚಿಕಿತ್ಸೆ ನಡೆಸಲಾಗಿತ್ತು. ಎರಡು ತಿಂಗಳ ಹಿಂದೆ ರೋಗ ಉಲ್ಬಣಿಸಿದಾಗ ಅವರನ್ನು ಕೊಟ್ಟಯಂ ಮೆಡಿಕಲ್ ಕಾಲೇಜಾಸ್ಪತ್ರೆಗೆಸೇರಿಸಲಾಯಿತು. ಕಳೆದ ಹದಿನೈದನೆ ತಾರಿಕಿನಂದು ಅವರು ಅಲ್ಲಿಮೃತರಾದರು. ಶವವನ್ನು ಪಡೆಯಲು ಕುಟುಂಬದವರು ಯಾರೂ ಬರಲಿಲ್ಲ.


 ಇಪ್ಪತ್ತು ವರ್ಷಕ್ಕಿಂತ ಹೆಚ್ಚು ಸಮಯ ಆಗಿದೆ ಈ ಕುಟುಂಬ ಯಾವ ವಿಷಯಕ್ಕೂ ಕೃಷ್ಣ ಮುರಳಿ ತಿರುಗಿ ನೋಡಿಲ್ಲ. ಮಗಳ ಮದುವೆಗೆ ಕರೆದರೂ ಅವರು ಹೋಗಲಿಲ್ಲ. ಮನೆಸಮೀಪದ ಕುಡಿವ ನೀರಿನ ಕಂಪೆನಿಯಲ್ಲಿ ಕೆಲಸಮಾಡಿ ಕೃಷ್ಣಮುರಳಿಯ ಪತ್ನಿ ಮಕ್ಕಳನ್ನು ಸಲಹಿದ್ದರು. ಕಲಿಸಿ ವಿವಾಹ ಮಾಡಿಸಿದ್ದರು. ಮೂರು ತಿಂಗಳ ಹಿಂದೆ ಕೃಷ್ಣಮುರಳಿಯಪತ್ನಿ ಮಗ ಹಾಗೂ ಅಮ್ಮ ವಾಸಿಸುತ್ತಿದ್ದ ಬಾಡಿಗೆ ಮನೆ ಬಂದಿದ್ದರೆಂದು ನೆರೆಯವರು ಹೇಳುತ್ತಾರೆ. ಒಂದು ಗಂಟೆಯೂ ಅಲ್ಲಿ ನಿಂತಿರಲಿಲ್ಲ ಎಂದು ಅವರು ಹೇಳುತ್ತಾರೆ.


ಮೃತದೇಹವನ್ನು ಪಡೆದುೊಳ್ಳಿ ಆಸ್ಪತ್ರೆಯವರು ಹೇಳಿದಾಗಮನೆಯವರು ಅದಕ್ಕೆ ಸಿದ್ಧರಾಗಲಿಲ್ಲ. ಕೃಷ್ಣಮುರಳಿ ಅಮ್ಮ ಕೂಡ ಒಂದು ನೋಟ ನೋಡಲು ಇಷ್ಟಪಡಲಿಲ್ಲ. ಆನಂತರ ಪಂಚಾಯತ್ ಸಕ್ರಿಯವಾಯಿತು. ಮೃತದೇಹ ಪಡೆದುಅದರ ಸಂಸ್ಕಾರಕ್ಕೆ ಸಿದ್ಧವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News