ಬೆಳ್ತಂಗಡಿ: ಪುಸ್ತಕ ವ್ಯಾಪಾರಿ ರಸ್ತೆ ಅಪಘಾತದಲ್ಲಿ ಮೃತ್ಯು
Update: 2016-02-23 18:54 IST
ಬೆಳ್ತಂಗಡಿ: ಪುಸ್ತಕ ವ್ಯಾಪಾರಿಯೋರ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಉಜಿರೆ ಸನಿಹದ ಕಾಶಿಬೆಟ್ಟು ಎಂಬಲ್ಲಿ ಮಗಳವಾರ ಸಂಭವಿಸಿದೆ.
ಮೃತರನ್ನು ಹಾವೇರಿ ಮೂಲದ ಲಕ್ಷ್ಮಣ (23) ಎಂದು ಗುರುತಿಸಲಾಗಿದೆ. ಇವರು ಬೈಕ್ನಲ್ಲಿ ಗದಗದ ಶಿವ(21) ಎಂಬುವರೊಂದಿಗೆ ಉಜಿರೆ ಕಡೆಯಿಂದ ಬೆಳ್ತಂಗಡಿಗೆ ಹೋಗುತ್ತಿದ್ದಾಗ ಕಾಶಿಬೆಟ್ಟು ಏರುವಿನಲ್ಲಿ ನಿಯಂತ್ರಣ ತಪ್ಪಿಎದುರಿನಿಂದ ಬರುತ್ತಿದ್ದ ಅಟೋರಿಕ್ಷಾ ಡಿಕ್ಕಿ ಹೊಡೆಯಿತು. ಇದರಿಂದ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರರ ಕಾಲಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.