ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿ ಮೃತ ಫರಂಗಿಪೇಟೆ ಯುವಕರ ಅಂತ್ಯ ಸಂಸ್ಕಾರ

Update: 2016-02-25 06:49 GMT

ಬಂಟ್ವಾಳ, ಫೆ.25: ಮಡಿಕೇರಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಫೀಕ್ ಹಾಗೂ ಶಮೀರ್‌ರ ಅಂತ್ಯ ಸಂಸ್ಕಾರವು ನೂರಾರು ಜನರ ಸಮ್ಮುಖದಲ್ಲಿ ಗುರುವಾರ ಫರಂಗಿಪೇಟೆ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿತು. ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕುಂಪನಮಜಲು ನಿವಾಸಿ ಶಮೀರ್ ಅವರ ಮೃತದೇಹದ ಅಂತ್ಯಸಂಸ್ಕಾರ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನೆರವೇರಿತು. ಅಪಘಾತದ ಸ್ಥಳದಲ್ಲೇ ಮೃತಪಟ್ಟ ಮೂಲತಃ ಫರಂಗಿಪೇಟೆ ನಿವಾಸಿ ಪ್ರಸ್ತುತ ತುಂಬೆಯಲ್ಲಿ ನೆಲೆಸಿರುವ ಶಫೀಕ್ ಅವರ ಮೃತದೇಹದ ಅಂತ್ಯಸಂಸ್ಕಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನೆರವೇರಿತು. ದಫನ ಕಾರ್ಯದ ವೇಳೆ ನೂರಾರು ಮಂದಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News