6 ಲಕ್ಷ ರೂ. ಮೌಲ್ಯದ ಅಕ್ರಮ ಗಾಂಜಾ ಪತ್ತೆ

Update: 2016-03-01 16:54 GMT

ಮಂಗಳೂರು,ಮಾ.1: ಕೇರಳದಿಂದ ರೈಲಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 6 ಲಕ್ಷ ರೂ. ವೌಲ್ಯದ 22.08 ಕಿ.ಗ್ರಾಂ ಗಾಂಜವನ್ನು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಸೋಮವಾರದಂದು ರಾತ್ರಿ 9 ಗಂಟೆಗೆ ದಾಳಿ ನಡೆಸಿದ್ದು ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ.

    ರೈಲ್ವೆ ಸುರಕ್ಷ ದಳದ ಉಪ ನಿರೀಕ್ಷಕರಾದ ಪುರೋಷೊತ್ತಮ್ ಪೂಜಾರಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್‌ರವರ ಕಛೇರಿಯ ಅಬಕಾರಿ ನಿರೀಕ್ಷಕ ಕೆ. ರತ್ನಾಕರ್ ರೈ ಇವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಜಗನ್ನಾಥ್ ನಾಯ್ಕಾ ಮತ್ತು ಮಂಗಳೂರು ಉಪವಿಭಾಗ-1ರ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್ ಮತ್ತು ಚಾಲಕರಾದ ಯೋಗೀಶ್ ಕುಮಾರ್ ಇವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News