ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಅಸ್ತಿತ್ವಕ್ಕೆ
ಬೆಂಗಳೂರು, ಮಾ.4: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್ಸೆಸ್ಸೆಫ್ನ ಕರ್ನಾಟಕ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಅಧ್ಯಕ್ಷ ಪಾಣಕ್ಕಾಡ್ ಸೈಯದ್ ಹಮೀದಲಿ ಶಿಹಾಬ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪ್ರತಿನಿಧಿಗಳ ಸಂಗಮದಲ್ಲಿ ನೂತನ ಸಮಿತಿಗೆ ಚಾಲನೆ ನೀಡಲಾಗಿದೆ.
ಅಧ್ಯಕ್ಷರಾಗಿ ಮೌಲಾನಾ ಅನೀಸ್ ಕೌಸರಿ ಪುತ್ತೂರು, ಪ್ರ. ಕಾರ್ಯದರ್ಶಿಯಾಗಿ ಆರಿಫ್ ಫೈಝಿ ಹಾಗೂ ಕೋಶಾಧಿಕಾರಿಯಾಗಿ ಅಸ್ಲಂ ಫೈಝಿ ಬೆಂಗಳೂರು ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಯು.ಮುಹಮ್ಮದ್ ಮುಸ್ಲಿಯಾರ್ ಮೈಸೂರು, ಕೆ.ಎ.ಸಲೀಂ ಅಬ್ದುಲ್ಲಾ ಹಾಸನ, ಅಶ್ರಪ್ ಪೈಝಿ ಕೊಡಗು, ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಅಝ್ಹರಿ ಚಿಕ್ಕಮಂಗಳೂರು, ಇಸ್ಮಾಯೀಲ್ ಯಮನಿ ಮಂಗಳೂರು ಆಯ್ಕೆಯಾಗಿದ್ದಾರೆ.
ನೌಫಲ್ ಹುದವಿ ಮಂಗಳೂರು, ರಿಯಾಝ್ ದಾರಿಮಿ ಚಿಕ್ಕಮಗಳೂರು, ಸಲೀಂ ಮುಸ್ಲಿಯಾರ್ ಮಡಿಕೇರಿ, ಜುನೈದ್ ಬೆಂಗಳೂರು, ಯೂಕುಬ್ ಬಿ ಅಲವಿ ಬೆಂಗಳೂರು, ಅಬ್ಬು ಹಾಸನ, ಅಬ್ದುರ್ರಶೀದ್ ಹಾಸನ, ಜಲೀಲ್ ಬದ್ರಿಯಾ ಮಂಗಳೂರು, ಇಕ್ಬಾಲ್ ಮೌಲವಿ ಕೊಡಗು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇರಳ ಎಸ್ಕೆಎಸ್ಸೆಸ್ಸೆಫ್ನ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರು, ಕೋಶಾಧಿಕಾರಿ ಬಶೀರ್ ಫೈಝಿ ದೇಶಮಂಗಲಂ, ಶರಫುದ್ದೀನ್ ಹುದವಿ ಮತ್ತಿತರರು ಪಾಲ್ಗೊಂಡಿದ್ದರು.