×
Ad

ಕಾರ್ಕಳ: ಪುರಸಭೆಯಿಂದ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣೆ

Update: 2016-03-05 18:38 IST

ಕಾರ್ಕಳ: ಕಾರ್ಕಳ ಪುರಸಭೆಯಿಂದ ಸಾಲಮನ್ನಾ ತಿಳುವಳಿಕೆ ಪ್ರಮಾಣ ಪತ್ರವನ್ನು ಶನಿವಾರ ವಿತರಿಸಲಾಯಿತು. ಪುರಸಭೆ ವ್ಯಾಪ್ತಿಯ ಒಟ್ಟು 186 ಫಲಾನುಭವಿಗಳಿಗೆ ಈ ಪ್ರಮಾಣ ಪತ್ರವನ್ನು ಅಧ್ಯಕ್ಷೆ ರೆಹಮತ್ ಎನ್.ಶೇಖ್ ವಿತರಿಸಿದರು. 1993-94ರಿಂದ 2003ರವರೆಗೆ ಫಲಾನುಭವಿಗಳು ಪಡೆದ ಆಶ್ರಯ ಸಾಲವನ್ನು ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮನ್ನಾ ಮಾಡಿದೆ. ಸರಕಾರವನ್ನು ನಾನು ಅಭಿನಂದಿಸುತ್ತೇನೆ ಎಂದರು. ಫಲಾನುಭವಿಗಳು ಸರಕಾರಕ್ಕೆ ಅಡಮಾನ ಹಾಕಿದ ಹಕ್ಕುಪತ್ರಗಳನ್ನು ಇದೀಗ ವಾಪಾಸ್ಸು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು. ಪುರಸಭೆ ಸದಸ್ಯರಾದ ಸುಭಿತ್.ಎನ್.ಆರ್, ನಳಿನಿ ಆಚಾರ್ಯ, ಅಶ್ಪಕ್ ಅಹ್ಮದ್, ಮೊಹಮ್ಮದ್ ಶರೀಫ್ ಸಾಲ ಮನ್ನಾದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನುಡಿದಂತೆ ನಡೆದ ಸರಕಾರ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದ ಸರಕಾರ. ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುತ್ತಾ ಬಂದಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರವು ಬಡ್ಡಿ ಮನ್ನಾ ಮಾಡಿದ್ದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಲವನ್ನೇ ಮನ್ನಾ ಮಾಡಿದೆ ಎಂದು ಶ್ಲಾಘಿಸಿದರು.

ಪುರಸಭೆ ಉಪಾಧ್ಯಕ್ಷೆ ಶಶಿಕಲ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ , ಮುಖ್ಯಾಧಿಕಾರಿ ರಾಯಪ್ಪ ಮತ್ತಿತರ ಸದಸ್ಯರುಗಳು ಉಪಸ್ಥಿತರಿದ್ದರು. ಈಶ್ವರ ನಾಯ್ಕಿ ಕಾರ್ಯಕ್ರಮ ನಿರೂಪಿಸಿದರು. ಪೊಟೋಕ್ಯಾಪ್ಶನ್ : ಸಾಲಮನ್ನಾ ತಿಳುವಳಿಕೆ ಪತ್ರವನ್ನು ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News