ಭಟ್ಕಳ: ಕೊಂಕಣಿ ಸಾಂಸ್ಕೃತಿಕ ಉತ್ಸವದಲ್ಲಿ ರಂಜಿಸಿದ ಕಲಾತಂಡಗಳ ಪ್ರದರ್ಶನ
ಭಟ್ಕಳ:ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೊಂಕಣಿ ಸಾಂಸ್ಕೃತಿ ಉತ್ಸವದಲ್ಲಿ ವಿವಿಧ ಕಲಾತಂಡಗಳ ಜಾನಪದ ನೃತ್ಯ,ಸಂಗೀತ,ರಸಮಂಜರಿ ರಂಜಿಸಿತು.
ಭಟ್ಕಳದ ಕೊಂಕಣ ಖಾರ್ವಿ ಕಲಾಮಾಂಡ್ ತಂಡದ ಖಾರ್ವಿ ಜಾನಪದ ನೃತ್ಯ,ಶಿರೂರ್ ಮೇಸ್ತ ಕಲಾ ತಂಡದ ಮೇಸ್ತ ಜಾನಪದ ನೃತ್ಯ,ಹೊನ್ನಾವರ ಕರಾವಳಿ ಬಳಗದವರ ಸಂಗೀತ ಮತ್ತು ನೃತ್ಯ,ನಾಕುದಾ ದಫ್ ಮಂಡಳಿಯವರ ದಫ್ ನೃತ್ಯ,ಝೇಂಕಾರ್ ಮೆಲೋಡಿಸ್ ತಂಡದವರ ಕೊಂಕಣಿ ರಸಮಂಜರಿ,ಲೂರ್ಡ್ಸ ಚರ್ಚ ಮುಂಡಳ್ಳಿ ತಂಡದವರ ಸಾಂಸ್ಕೃತಿಕ ಕಾರ್ಯಕ್ರಮ,ನವಾಯಿತಿ ಮೆಹಫಿಲ್ನಿಂದ ಗಝಲ್ ಮತ್ತು ನಾಟಕ,ನಯನಾ ನೃತ್ಯ ನಿಕೇತನ ಇವರಿಂದ ಭರತನಾಟ್ಯ ಕಾರ್ಯಕ್ರಮಗಳು ಆಕರ್ಷಣೀಯವಾಗಿತ್ತು.
ಕೊಂಕಣಿ ಸಾಂಸ್ಕೃತಿ ಉತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಪ್ರಾಸ್ತಾವಿಕ ಮಾತನಾಡಿದರು.ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಿ ಜಗದೀಶ ಸುಕ್ರನಮನೆ,ಕೊಂಕಣಿ ಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ,ನಾಗಯಕ್ಷೆ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮುಂತಾದವರು ಉಪಸ್ಥಿತರಿದ್ದರು.
ಪ್ರಸನ್ನಪ್ರಭು ಮತ್ತು ಡಾ.ಅರವಿಂದ ಶಾನುಭಾಗ್ ನಿರೂಪಿಸಿದರು.ದೇವಿದಾಸ ಪೈ ವಂದಿಸಿದರು.