×
Ad

ಹೋರಾಟದ ಮೂಲಕ ಕಾರ್ಮಿಕರು ಪಡೆದ ಹಕ್ಕುಗಳನ್ನು ಉಳಿಸಲು ಮತ್ತೆ ಸಂಘಟಿತ ಹೋರಾಟ ಅನಿವಾರ್ಯ - ಕೆ . ಪಿ ರಾಜೇಂದ್ರನ್

Update: 2016-03-07 16:02 IST

ಕಾಸರಗೋಡು :  ಹೋರಾಟದ ಮೂಲಕ ಕಾರ್ಮಿಕರು   ಪಡೆದ  ಹಕ್ಕುಗಳನ್ನು  ಉಳಿಸಲು  ಮತ್ತೆ ಸಂಘಟಿತ ಹೋರಾಟ ಅನಿವಾರ್ಯ ಎಂದು ಎ. ಐ . ಟಿ . ಸಿ  ರಾಜ್ಯ ಕಾರ್ಯದರ್ಶಿ  ಕೆ . ಪಿ ರಾಜೇಂದ್ರನ್   ಅಭಿಪ್ರಾಯಪಟ್ಟರು.

ಅವರು  ಸೋಮವಾರ ಕಾಸರಗೋಡಿನಲ್ಲಿ   ಕೇರಳ ಕೋ - ಅಪರೇಟಿವ್  ಎಂಪ್ಲೋಯಿಸ್  ಕೌನ್ಸಿಲ್ ( ಎ ಐ ಟಿ ಯು ಸಿ ) ಕಾರ್ಮಿಕ ಸಂಘಟನೆಯ  ೧೩ ನೇ  ರಾಜ್ಯ  ಸಮ್ಮೇಳ ದಂಗವಾಗಿ  ನಡೆದ ಪ್ರತಿನಿಧಿ ಸಮ್ಮೇಳನ ವನ್ನು   ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಮಿಕರ ಹಕ್ಕುಗಳನ್ನು  ಕಸಿಯಲು ಕೇಂದ್ರ - ರಾಜ್ಯ ಸರಕಾರ ಹುನ್ನಾರ  ನಡೆಸುತ್ತಿದೆ. ಸಾರ್ವಜನಿಕ ವಲಯದ  ಸಂಸ್ಥೆ ಗಳನ್ನು  ಖಾಸಗಿಕರಣಗೊಳಿಸಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್ ಗಳನ್ನೂ ಖಾಸಗಿ ಕರಣ  ಗೊಳಿಸಲಾಗಿದೆ. ಕಾರ್ಮಿಕರು  ಬೀದಿಪಾಲಾಗುವ  ಸ್ಥಿತಿ ತಲುಪಿದ್ದು , ಹಕ್ಕುಗಳ ನ್ನು  ಉಳಿಸಲು ಹೋರಾಟ  ಸನ್ನಿಹಿತವಾಗಿದೆ ಎಂದರು.

ರಾಜ್ಯ ಅಧ್ಯಕ್ಷ  ಕಮಲಾಧರನ್  ಅಧ್ಯಕ್ಷತೆ ವಹಿಸಿದ್ದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ  ಗೋವಿಂದನ್ ಪಳ್ಳಿಕಾಪಿಲ್, ಕೆ . ವಿ ಕೃಷ್ಣನ್ , ಟಿ. ಕೃಷ್ಣನ್ , ಸಿ . ಚಂದ್ರಬಾಬು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News