ಉಪ್ಪಿನಂಗಡಿ: ವಿಷ ಸೇವಿಸಿ ಯುವಕನ ಆತ್ಮಹತ್ಯೆ
Update: 2016-03-07 20:15 IST
ಉಪ್ಪಿನಂಗಡಿ: ಅವಿವಾಹಿತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಉಪ್ಪಿನಂಗಡಿ ಬಳಿಯ ಅಲಗುರಿಮಜಲು ಎಂಬಲ್ಲಿ ವರದಿಯಾಗಿದೆ.
ಇಲ್ಲಿನ ಕೊರಮ ಮುಗೇರ ಎಂಬವರ ಮಗ ಶಿವರಾಮ (29) ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ. ತಾನು ಮದುವೆಯಾಗಲು ಬಯಸಿದ್ದ ಯುವತಿಯನ್ನು ಮದುವೆಯಾಗಲು ಮನೆಮಂದಿ ನಿರಾಕರಿಸಿರುವುದೇ ಆತ್ಮಹತ್ಯೆಗೆ ಕಾರಣವೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.