ಜೆ ಎನ್ ಯು ಪ್ರಕರಣದ ವರದಿ ಮಾಡಿದ್ದಕ್ಕೆ ಹಿರಿಯ ಪತ್ರಕರ್ತೆ ಬರ್ಖಾ ದತ್ ಗೆ ಅತ್ಯಾಚಾರ, ಕೊಲೆ ಬೆದರಿಕೆ

Update: 2016-03-08 14:07 GMT

ಹೊಸದಿಲ್ಲಿ , ಮಾ . 8: ಹಿರಿಯ ಪತ್ರಕರ್ತೆ ಬರ್ಖಾ ದತ್ ಜೆ ಎನ್ ಯು ಪ್ರಕರಣದ ಕುರಿತು ಮಾಡಿದ ವರದಿಗಳಿಗಾಗಿ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಂಗಳವಾರ ದೂರಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಬರ್ಖಾ , ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ಎದುರು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ. 

" ನನಗೆ ಮಾರ್ಚ್ ೪ ರಿಂದ ಜೆ ಎನ್ ಯು ಪ್ರಕರಣದ ವರದಿ ಮಾಡಿದ್ದಕ್ಕೆ ನನಗೆ ಅಪರಿಚಿತರಿಂದ ಬಯ್ಗುಳ ಹಾಗು ಕೊಲ್ಲುವ  ಬೆದರಿಕೆ ಕರೆಗಳು ಬರುತ್ತಿವೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ " ಎಂದು ಬರ್ಖಾ ಟ್ವೀಟ್ ಮಾಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನನ್ನನ್ನು ರೇಪ್ ಮಾಡುತ್ತೇನೆ ಹಾಗು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಬರ್ಖಾ ದೆಹಲಿ ಮಹಿಳಾ ಆಯೋಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದರು. 

ಪ್ರಕರಣದ ಕುರಿತು ಎಫ್ ಐ ಆರ್ ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News