ಕಿನ್ನಿಗೋಳಿ : ಚರಂಡಿಗೆ ಬಿದ್ದು ಉಸಿರುಗಟ್ಟಿ ವ್ಯಕ್ತಿಯ ಸಾವು

Update: 2016-03-10 10:51 GMT

ಕಿನ್ನಿಗೋಳಿ, ಮಾ.10: ಕಿರಿದಾದ ಚರಂಡಿಗೆ ಬಿದ್ದು ಉಸಿರುಗಟ್ಟಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಿನ್ನಿಗೋಳಿ ಸಮೀಪದ ಕೊಲ್ಲೂರು ಪದವು ಎಂಬಲ್ಲಿ ನಡೆದಿದೆ.
  ಕಿನ್ನಿಗೋಳಿ ಕೊಲ್ಲೂರು ಪದವು ನಿವಾಸಿ ದಿನಕರ ಪೂಜಾರಿ 55 ಎಂಬವರು ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ಜಾತ್ರೆ ಹಾಗೂ ಸಭೆ ಸಮಾರಂಭಗಳಲ್ಲಿ ಬ್ಯಾಂಡ್ ವಾದನ ನುಡಿಸುವ ಇವರು ನಿನ್ನೆ ರಾತ್ರಿ ದೇಂದಡ್ಕ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಬೆಳಗ್ಗೆ ಮನೆಗೆ ಮರಳಿದ್ದರು. ಬಳಿಕ ಬೆಳಗ್ಗೆ ಸುಮಾರು 10 ಗಂಟೆಯ ವೇಳೆ ಮನೆ ಸಮೀಪದಲ್ಲಿ ಗೇರು ಬೀಜ ಕೊಯ್ಯುತ್ತಿದ್ದ ವೇಳೆ ಅಕಸ್ಮಾತ್ ಆಗಿ ಕಿರಿದಾದ ಚರಂಡಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
  ಮುಲ್ಕಿ ಪೊಲೀಸರು ಸ್ಥಳ ಪರಿಶೀಲಿಸಿ ಶವ ಮಹಜರು ನಡೆಸಿ ಪ್ರಕರನ ದಾಕಲಿಸಿಕೊಂಡಿದ್ದಾರೆಎ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News