ತನಿಖಾ ವರದಿಗಾರಿಕೆ ಪತ್ರಿಕೋದ್ಯಮರಂಗದ ಅವಿಭಾಜ್ಯ ಅಂಗ: ಡಾ. ವಹೀದಾ ಸುಲ್ತಾನ
ಮೂಡುಬಿದಿರೆ, ಮಾ.11: ಪತ್ರಿಕೋದ್ಯಮ ಎನ್ನುವಂತಹದ್ದು ಸವಾಜ ಬದಲಾವಣೆಗೊಳ್ಳಿಸುವಂತಹದ್ದು. ಸರ್ಕಾರ ಮಾಡದ ಕೆಲಸವನ್ನುಇಂದು ಮಾಧ್ಯಮ ಕ್ಷೇತ್ರವು ಸಮಾಜ ಬದಲಾವಣೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಪತ್ರಿಕೆ ಕೇವಲ ಸುದ್ದಿ ಕ್ರೈಂ ಕ್ರೀಡೆ ಹಾಗೂ ಮನೋರಂಜನೆ ಸುದ್ದಿ ಜೊತೆಗೆತನಿಖಾ ಸುದ್ದಿ ಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ವಹೀದಾ ಸುಲ್ತಾನ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಮೂರನೇ ವರ್ಷದ ಮೀಡಿಯಾ ಬರ್, ಉತ್ಸವವನ್ನು ಉದ್ಘಾಟಿಸಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಯಾರಿಸಿದ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆಗೊಳ್ಳಿಸಿ, ಅವರು ತನಿಖಾ ಪತ್ರಿಕೋದ್ಯಮದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ಕುರಿತು ಮಾತಾನಡಿದರು.
ಪತ್ರಿಕೋದ್ಯಮ ಎನ್ನುವಂತಹದ್ದು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಹದ್ದು, ಎಲ್ಲ ವಿಷಯಗಳ ಜೊತೆಗೆ ತನಿಖಾ ಪತ್ರಿಕೋದ್ಯಮ ಎಂಬ ಪ್ರತ್ಯೇಕ ವಿಷಯವಾಗಬೇಕು ಎಂದರು. ರಾಜ್ಯದಲ್ಲಿ ಇಂದು ಯುವಕರು ಡ್ರಾಗ್ಸ್ ತೆಗೆದುಕೊಳ್ಳುತ್ತಿರುವುದು ಹೆಚ್ಚಾಗಿ ಕಾಣುತ್ತೇವೆ, ಅದರ ಬಗ್ಗೆ ಪತ್ರಕರ್ತರು ತನಿಖೆ, ವರದಿ ಮಾಡುವಲ್ಲಿ ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಮಂಗಳೂರಿನ ವಿಶ್ವವಾಣಿ ವರದಿಗಾರ ಜಿತೇಂದ್ರ ಕುಂದೇಶ್ವರ ಮಾತಾನಾಡಿ, ತನಿಖಾ ವರದಿಗಳು ಮಾಧ್ಯಮಗಳಿಗೆ ಕಿರೀಟವಿದ್ದಂತೆ. ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳಿಗಿಂತ ತನಿಖಾ ವರದಿಗಳು ಮಹತ್ವ ಪಾತ್ರ ವಹಿಸುತ್ತದೆ ಎಂದರು.
ತನಿಖಾ ವರದಿಗಾರಿಕೆಯಲ್ಲಿ ಗುರಿ ಮಾಡಬೇಕಿರೋದು ವ್ಯಕ್ತಿಗಳನ್ನಲ್ಲ, ಸಾಂಸ್ಥಿಕ ಸ್ವರೂಪದ ಲೋಪಗಳನ್ನು ಇದನ್ನುಅರ್ಥ ಮಾಡಿಕೊಂಡು ವರದಿ ಮಾಡಿದರೆ ವರದಿಗಾರ ಸಮಾಜದಲ್ಲಿ ದೈರ್ಯದಿಂದ ಬದುಕು ಸಾಗಿಸುವಂತಹದ್ದು, ಹಾಗೂ ಸಮಾಜವನ್ನು ಬೆಳಗಿಸಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಿ ಪ್ರಾಸ್ತಾವಿಕ ಮಾತಾನಾಡಿದರು.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಮಾರ್ಚ್ 12ರಂದು ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಭಾಗ ತೆರೆದುಕೊಳ್ಳಲಿದ್ದು, ತನಿಖಾ ಪತ್ರಿಕೋದ್ಯಮ ಕುರಿತಾಗಿ ಚರ್ಚೆ ನಡೆಯಲಿದೆ.
ಚರ್ಚೆಯಲ್ಲಿ ಸುವರ್ಣ ನ್ಯೂಸ್ ನ ಸೀನಿಯರ್ ಕರೆಸ್ಪಾಂಡೆಂಟ್ ವಿಜಯಲಕ್ಷ್ಮಿ ಶಿಬರೂರು ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯ ಮಂಗಳೂರು ವಿಭಾಗದ ಸ್ಥಾನಿಕ ಸಂಪಾದಕ ಹಾಗೂ ಮಂಗಳೂರು ಪ್ರೆಸ್ಕ್ಲಬ್ನ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಮತ್ತು ಮೂಡುಬಿದಿರೆ ಪ್ರೆಸ್ಕ್ಲಬ್ನ ಅಧ್ಯಕ್ಷ, ‘ಹೊಸದಿಗಂತ’ ದಿನಪತ್ರಿಕೆಯ ಕರೆಸ್ಪಾಂಡೆಂಟ್ ಎಂ.ಗಣೇಶ್ ಕಾಮತ್ ಜೊತೆಗೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟೀ ವಿವೇಕ್ ಆಳ್ವ ಅವರು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಉತ್ಸವ ನಡೆಯಲಿದ್ದು, ಅನೇಕ ಸ್ಪರ್ಧೆಗಳಿಗೆ ಮೀಡಿಯಾ ಬಜ್ ವೇದಿಕೆ ನೀಡುತ್ತಿದೆ. ಫೋಟೋಗ್ರಫಿ, ವಿಜೆ ಹಂಟ್, ಲೈವ್ರಿ ಪೋರ್ಟಿಂಗ್, ಪೇಜಿನೇಶನ್, ಮ್ಯಾಡ್ಆ್ಯಡ್, ಮಾಕ್ಪ್ರೆಸ್, ಪ್ರೊಡಕ್ಟ್ ಪ್ರೊಮೋಶನ್, ಕಿರುಚಿತ್ರ, ಸಾಕ್ಷ್ಯಚಿತ್ರ, ರೇಡಿಯೋ ಫೀಚರ್, ಕ್ವಿಜ್ ಹೀಗೆ ಸುಮಾರು 11 ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ.