×
Ad

ಹರ್ಷೋತ್ಸವ: ಅದೃಷ್ಟಶಾಲಿ ವಿಜೇತರು

Update: 2016-03-11 23:36 IST

ಮಂಗಳೂರು, ಮಾ.11: ಗೃಹೋ ಪಯೋಗಿ ಹಾಗೂ ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ ‘ಹರ್ಷ’ದ ಮಳಿಗೆಗಳಲ್ಲಿ ನಡೆಯುತ್ತಿರುವ ವಾರ್ಷಿಕ ಶಾಪಿಂಗ್ ಹಬ್ಬ ‘ಹಷೋತ್ಸವ’ದ ಪ್ರಯುಕ್ತ ಆಯೋಜಿಸಿರುವ ಲಕ್ಕಿ ಡ್ರಾ ವಿಜೇತರ ವಿವರ ಇಂತಿವೆ.

ಫಳ್ನೀರ್: ಮಂಗಳೂರಿನ ಫಳ್ನೀರ್‌ನ ಮಳಿಗೆಯ ಇಂದಿನ ಲಕ್ಕಿ ಡ್ರಾದಲ್ಲಿ ವಿಜೇತ ಗ್ರಾಹಕ ರಿಯಾಝ್ ಬಜ್ಪೆಯವರಿಗೆ ಬಹು ಮಾನವಾದ ಮೈಕ್ರೋವೇವ್ ಓವನ್‌ನ್ನು ಹರ್ಷ ಮಳಿಗೆಯ ಫ್ಲೋರ್ ಮ್ಯಾನೇಜರ್ ಸಂತೋಷ್ ಪಿರೇರಾ ಹಸ್ತಾಂತರಿಸಿದರು.

ಕುಂದಾಪುರ: ಕುಂದಾಪುರ ಮಳಿಗೆಯಲ್ಲಿ ಅದೃಷ್ಟಶಾಲಿ ಗ್ರಾಹಕ ಗುರುನಂದನ್‌ರಿಗೆ ಬಹುಮಾನವಾದ ಆ್ಯಪಲ್ ಐಫೋನ್‌ನ್ನು ಕುಂದಾಪುರ ಶಾಖೆಯ ಮ್ಯಾನೇಜರ್ ಭಾಸ್ಕರ್ ಬಿ. ಹಸ್ತಾಂತರಿಸಿದರು. ಇನ್ನೋರ್ವ ಅದೃಷ್ಟಶಾಲಿ ವಿಜೇತರಾದ ವಿ.ಶಶಿಧರ ಹೊಳ್ಳರಿಗೆ ಬಹುಮಾನವಾದ ಒನಿಡಾ ಎ.ಸಿ.ಯನ್ನು ಹರ್ಷ ಕುಂದಾಪುರ ಮಳಿಗೆಯಿರುವ ಕಟ್ಟಡದ ಮಾಲಕ ಸತೀಶ್ ಕೋಟ್ಯಾನ್, ಪ್ರಕಾಶ್ ರಿಟೈಲ್ ಪ್ರೈ. ಲಿ.ನ ಅಕೌಂಟ್ ಮ್ಯಾನೇಜರ್ ಕೇಶವ ಮಲ್ಯ ಹಾಗೂ ಬ್ರಾಂಚ್ ಮ್ಯಾನೇಜರ್ ಭಾಸ್ಕರ್ ಬಿ. ಹಸ್ತಾಂತರಿಸಿದರು.

ಉಡುಪಿ ಕೆ.ಎಂ.ರಸ್ತೆ: ಉಡುಪಿ ಕೆ.ಎಂ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಲಕ್ಕಿ ಡ್ರಾ ವಿಜೇತ ಗ್ರಾಹಕ ಶರತ್ ನಾಯ್ಕಾ ಕರ್ಜೆಯವರಿಗೆ ಕಾರ್ತಿಕ್ ಕುಮಾರ್, ಬಹುಮಾನವಾದ ಮೈಕ್ರೋವೇವ್ ಓವನ್‌ನ್ನು ಹಸ್ತಾಂತರಿಸಿದರು.

ಉಡುಪಿ: ಉಡುಪಿ ಕಿತ್ತೂರು ರಾಣಿ ಚೆನ್ನಮ್ಮ ರೋಡ್‌ನಲ್ಲಿರುವ ಮಳಿಗೆಯಲ್ಲಿನ ಅದೃಷ್ಟಶಾಲಿ ವಿಜೇತ ಗ್ರಾಹಕ ರಾಜೇಶ್ ಶೆಟ್ಟಿ ಬ್ರಹ್ಮಾವರರಿಗೆ ಬಹುಮಾನ ಮೈಕ್ರೋವೇವ್ ಓವನ್‌ನ್ನು ಮಳಿಗೆಯ ಎಕ್ಸಿಕ್ಯೂಟಿವ್ ಸೇಲ್ಸ್‌ನ ಸುನೀಲ್ ದಾಸ್ ಮಲ್ಪೆ ಹಾಗೂ ಉದಯಕುಮಾರ್ ಹಸ್ತಾಂತರಿಸಿದರೆ, ಇನ್ನೋರ್ವ ವಿಜೇತ ಗ್ರಾಹಕ ಬೆಟ್ಟೆ ಶಾನವಾಝ್ ಮುಹಮ್ಮದ್‌ರಿಗೆ ಬಹುಮಾನವಾದ ಓವನ್‌ನ್ನು ಮಳಿಗೆ ಎಕ್ಸಿಕ್ಯೂಟಿವ್ ಸೇಲ್ಸ್‌ನ ಯತೀಶ್ ಕುಮಾರ್ ಹಸ್ತಾಂತರಿಸಿದರು.

ಪುತ್ತೂರು: ಲಕ್ಕಿಡ್ರಾ ವಿಜೇತ ಗ್ರಾಹಕ ಅಶ್ರಫ್‌ರಿಗೆ ಗ್ರೈಂಡರ್‌ನ್ನು ಬಹು ಮಾನವಾಗಿ ಮ್ಯಾನೇಜರ್ ಶ್ರೀಕಾಂತ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News