ಜಯಪ್ರಕಾಶ್ ಹೆಗ್ಡೆ ಬೆಂಬಲಿಗರಿಂದ ವೇದಿಕೆ ಸ್ಥಾಪನೆ

Update: 2016-03-12 18:19 GMT

ಕುಂದಾಪುರ, ಮಾ.12: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರ, ಹಿತೈಷಿಗಳ ಮತ್ತು ಸಮಾನ ಮನಸ್ಕರ ಸಭೆ ಕುಂದಾಪುರದ ಹಿರಿಯ ರಾಜಕಾರಣಿ ಮಾಣಿಗೋಪಾಲ್‌ರ ನಿವಾಸ ದ್ವಾರಕದಲ್ಲಿ ನಡೆಯಿತು.

ಈ ಸಂದರ್ಭ ಜನಪರ, ಪ್ರಗತಿ ಪರ ಎಂಬ ಸಂಘಟನೆಗೆ ತಾತ್ಕಾಲಿಕ ಸಂಚಾ ಲನಾ ಸಮಿತಿಯನ್ನು ರಚಿಸಲಾಯಿತು.

ಮುಖ್ಯ ಸಂಚಾಲಕರಾಗಿ ಮಾಣಿ ಗೋಪಾಲ್, ವಿ. ಚಂದ್ರಶೇಖರ ಹೆಗ್ಡೆ ದಬ್ಬೆಕಟ್ಟೆ, ಕಾಳಪ್ಪಪೂಜಾರಿ, ರಾಮಕೃಷ್ಣ ಹೇರ್ಳೆ, ಗಿರೀಶ್ ಜಿ.ಕೆ, ಶೈಲೇಶ್ ಕುಂದಾಪುರ ಮತ್ತು ಕಾಳಾವರ ಶ್ರೀಧರ್ ಆಚಾರ್ಯರನ್ನು ಸಹಸಂಚಾಲಕರಾಗಿ ಆಯ್ಕೆಯಾದರು. ಈ ಸಂದರ್ಭ ಸಂತೋಷ್ ದೇವಾಡಿಗ ಕೆ.ಎನ್, ಸ್ಟೀವನ್ ಡಿಕೋಸ್ತ, ವಿಜಯ ಡಿಸೋಜ, ನಾಗರಾಜ ಪುತ್ರನ್, ರಂಜಿತ್ ಕುಮಾರ್ ಶೆಟ್ಟಿ, ದೀಪಕ್ ನಾವುಂದ, ಸುಖ್‌ಪಾಲ್, ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ, ಕೋಡಿ ಸುನೀಲ್ ಪೂಜಾರಿ ಮುಂತಾ ದವರು ಉಪಸ್ಥಿತರಿದ್ದರು.

ಮಾರ್ಚ್ ತಿಂಗಳ ಕೊನೆಯ ವಾರ ದಲ್ಲಿ ಸಂಘಟನೆಯ ಉದ್ಘಾ ಟನೆ ನಡೆಯಲಿದ್ದು, ರಾಜ್ಯದ ಪ್ರಮುಖ ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News